ಕೋವಿಡ್ ಸೋಂಕಿಗೆ ಮಾಜಿ ಶಾಸಕ ಬಲಿ

(ನ್ಯೂಸ್ ಕಡಬ) newskadaba.com ಶಿವಮೊಗ್ಗ. ಸೆ.03:  ಕೋವಿಡ್ ಸೋಂಕಿಗೆ ಭದ್ರಾವತಿ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಮೂರುದಿನಗಳ ಹಿಂದಷ್ಟೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದ ಅಪ್ಪಾಜಿ ಗೌಡರಿಗೆ ಇಂದು ಉಸಿರಾಟದ ತೊಂದರೆ ಅತಿಹೆಚ್ಚು ಕಾಣಿಸಿಕೊಂಡಿದೆ.

 

 

ಕೋವಿಡ್-19 ನಿಂದಾಗಿ ಉಸಿರಾಟ ತೊಂದರೆ ಹೆಚ್ಚಾದ ಪರಿಣಾಮ ಅಪ್ಪಾಜಿಯವರನ್ನ ಇಂದು ಸಂಜೆ 7 ಕ್ಕೆ ಮೆಟ್ರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೆಟ್ರೋದಲ್ಲಿಯೂ ಸಹ ಚಿಕಿತ್ಸೆಗೆ ಸ್ಪಂಧಿಸದ ಅಪ್ಪಾಜಿಯವರನ್ನ ಮೆಗ್ಗಾನ್ ಗೆ ದಾಖಲಿಸಲಾಗಿತ್ತು. ಸುಮಾರು 10-30 ರ ಸಮಯದಲ್ಲಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರೂ ಸಹ ಚಿಕಿತ್ಸೆಗೆ ಸ್ಪಂಧಿಸದ ಅಪ್ಪಾಜಿ ದಾಖಲಾದ ಐದು ಹತ್ತು ನಿಮಿಷದಲ್ಲಿ ವಿಧಿವಶರಾಗಿದ್ದಾರೆ. ಎಂದು ಮೂಲಗಳು ತಿಳಿಸಿವೆ.

 

error: Content is protected !!

Join the Group

Join WhatsApp Group