ಕಡಬ: ನಿಗೂಢವಾಗಿ ಕಾಣೆಯಾಗಿದ್ದ ಯುವಕ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಆ. 29. ಫೈನಾನ್ಸ್ ನಲ್ಲಿ ಹಣ ಕಟ್ಟಿ ಬರುತ್ತೇನೆ ಎಂದು ಹೇಳಿ ಹೋದ ಯುವಕನೋರ್ವ ಮನೆಗೆ ಬಾರದೆ ನಾಪತ್ತೆಯಾಗಿ ಪ್ರಕರಣ ದಾಖಲಾಗಿರುವ ಕೆಲವೇ ಗಂಟೆಗಳಲ್ಲಿ ಯುವಕ ಮನೆಗೆ ಮರಳಿದ್ದಾನೆ.

ಚಾರ್ವಾಕ ನಿವಾಸಿ ಕೃಷ್ಣಪ್ಪ ಗೌಡ ಎಂಬವರ ಪುತ್ರ ಚಾಲಕ ವೃತ್ತಿ ಮಾಡುತಿದ್ದ ಲೋಕೇಶ್ (25) ಕಾಣೆಯಾಗಿದ್ದು ಇದೀಗ ಪತ್ತೆಯಾಗಿದ್ದಾನೆ. ಆ.26ರಂದು ಮನೆಯಿಂದ ಪುತ್ತೂರಿನ ಬಜಾಜ್ ಫೈನಾನ್ಸ್ ನಲ್ಲಿ ಸಾಲದ ಬಾಕಿ ಹಣ ಕಟ್ಟಲು ಹೋಗಿ ಸಂಜೆಯವರೆಗೂ ಮನೆಗೆ ಹಿಂತಿರುಗದೆ ಇದ್ದುದರಿಂದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈತನ ಬಗ್ಗೆ ಮಾಹಿತಿ ಸಿಕ್ಕಿದ್ದಲ್ಲಿ ಕಡಬ  ಠಾಣೆ 9480805364 ಅಥವಾ ಪೊಲೀಸ್ ಕಂಟ್ರೋಲ್ ರೂಂ 100 ಸಂಖ್ಯೆಗೆ ಮಾಹಿತಿ ನೀಡುವಂತೆ ಪೋಲಿಸರು ತಿಳಿಸಿದ್ದರು. ಆ. 28ರ ಮಧ್ಯಾಹ್ನದವರೆಗೂ ಕಣ್ಮರೆಯಾಗಿದ್ದ ಲೋಕೇಶ್,  ಅಂದೇ ಸಂಜೆಯ ವೇಳೆ ತಾನು ಸವಣೂರಿನಲ್ಲಿ ಬರುತಿದ್ದೆನೆಂದು ಮನೆಯವರಿಗೆ ಫೋನ್ ಮಾಡಿ ತಿಳಿಸಿ ನಂತರ ಮನೆಗೆ ಆಗಮಿಸಿದ್ದಾನೆ.

error: Content is protected !!

Join the Group

Join WhatsApp Group