ಪುತ್ತೂರು: ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು. ಆ. 27.  ನೀರು ತುಂಬಿಸಿಡಲಾಗಿದ್ದ ಬಕೇಟ್‌ ಒಂದಕ್ಕೆ ಎಳೆ ಹಸುಗೂಸು ಬಿದ್ದು, ಮೃತಪಟ್ಟ ಹೃದಯ ವಿದ್ರಾವಕ ಘಟನೆ ಕೊಂಬೆಟ್ಟುವಿನಲ್ಲಿ ನಡೆದಿದೆ.

 

 

ಕೊಂಬೆಟ್ಟವಿನ ಬಾಡಿಗೆಯ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಆ. 26ರಂದು ಸಂಜೆ ಹೆಣ್ಣು ಮಗುವೊಂದು ನೀರು ತುಂಬಿಸಿಟ್ಟ ಬಕೇಟ್‌ಗೆ ಬಿದ್ದಿರುವುದನ್ನು ತಡವಾಗಿ ಗಮನಿಸಿದ ಮನೆ ಮಂದಿ ತಕ್ಷಣವೇ ಪುತ್ತೂರು ಆಸ್ಪತ್ರೆಗೆ ಕರೆದೊಯ್ದರಾದರೂ ಆಗಲೇ ಮಗು ಮೃತಪಟ್ಟಿದೆ ಎನ್ನಲಾಗಿದೆ.

Also Read  ದ.ಕ ಜಿಲ್ಲೆಯಾದ್ಯಂತ ಮತದಾರರ ನೋಂದಣಿ ಅಭಿಯಾನ

error: Content is protected !!
Scroll to Top