ಪುತ್ತೂರು: ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು. ಆ. 27.  ನೀರು ತುಂಬಿಸಿಡಲಾಗಿದ್ದ ಬಕೇಟ್‌ ಒಂದಕ್ಕೆ ಎಳೆ ಹಸುಗೂಸು ಬಿದ್ದು, ಮೃತಪಟ್ಟ ಹೃದಯ ವಿದ್ರಾವಕ ಘಟನೆ ಕೊಂಬೆಟ್ಟುವಿನಲ್ಲಿ ನಡೆದಿದೆ.

 

 

ಕೊಂಬೆಟ್ಟವಿನ ಬಾಡಿಗೆಯ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಆ. 26ರಂದು ಸಂಜೆ ಹೆಣ್ಣು ಮಗುವೊಂದು ನೀರು ತುಂಬಿಸಿಟ್ಟ ಬಕೇಟ್‌ಗೆ ಬಿದ್ದಿರುವುದನ್ನು ತಡವಾಗಿ ಗಮನಿಸಿದ ಮನೆ ಮಂದಿ ತಕ್ಷಣವೇ ಪುತ್ತೂರು ಆಸ್ಪತ್ರೆಗೆ ಕರೆದೊಯ್ದರಾದರೂ ಆಗಲೇ ಮಗು ಮೃತಪಟ್ಟಿದೆ ಎನ್ನಲಾಗಿದೆ.

error: Content is protected !!

Join the Group

Join WhatsApp Group