ರಾಮಮಂದಿರ ಭೂಮಿ ಪೂಜೆಗೆ ರಾಜ್ಯದಿಂದ ಐದು ಮಂದಿಗೆ ಅವಕಾಶ

(ನ್ಯೂಸ್ ಕಡಬ) newskadaba.com.ಮಂಗಳೂರು,ಆ .3: ಅಯೋಧ್ಯೆಯಲ್ಲಿ ಪವಿತ್ರ ರಾಮಮಂದಿರದ ಶಿಲಾನ್ಯಾಸ ಆಗಷ್ಟು 5ರಂದು ನಡೆಯಲಿದೆ ಈ ಕಾರ್ಯಕ್ರಮಕ್ಕೆ ನಿಗದಿತ ಜನರಿಗೆ ಮಾತ್ರ ಅವಕಾಶ ಕೊಡಲಾಗಿದೆ. ಭೂಮಿ ಪೂಜೆಗೆ ರಾಜ್ಯದಿಂದ ಕೇವಲ ಐವರನ್ನು ಆಹ್ವಾನಿಸಲಾಗಿದೆ.


ಕಾರ್ಯಕ್ರಮಕ್ಕೆ ಒಟ್ಟು 200 ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು ರಾಜ್ಯದಿಂದ ರಾಮ ಮಂದಿರ ನಿರ್ಮಾಣ ಟ್ರಸ್ಟಿ ಗಳಲ್ಲಿ ಓರ್ವರಾದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಧರ್ಮಸ್ಥಳದ ಡಾ| ವೀರೇಂದ್ರ ಹೆಗ್ಗಡೆಯವರಿಗೆ , ಶೃಂಗೇರಿ ಮಠ, ಆದಿಚುಂಚನಗಿರಿ ಶ್ರೀಗಳಿಗೆ ಹಾಗೂ ಸುತ್ತೂರು ಮಠಾಧೀಶರಿಗೆ ಆಹ್ವಾನ ಬಂದಿದೆ.

error: Content is protected !!

Join the Group

Join WhatsApp Group