ಬುದ್ಧಿಮಾತು ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ



(ನ್ಯೂಸ್ ಕಡಬ) newskadaba.com ಪಡುಬಿದ್ರಿ, ಜು.26: ಮನೆಯವರು ಬುದ್ಧಿಮಾತು ಹೇಳಿದ್ದರಿಂದ ಮನನೊಂದು ಉಡುಪಿ ಕಾಲೇಜೊಂದರ ವಿದ್ಯಾರ್ಥಿನಿ ಎಲ್ಲೂರು ಸಾಣಿಂಜೆಯ ಸೌಜನ್ಯಾ(21) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.





 

 

ಆನ್‌ಲೈನ್ ತರಗತಿ ಮತ್ತು ಸಿಎ ಪರೀಕ್ಷೆ ಹಿನ್ನೆಲೆಯಲ್ಲಿ ಸೌಜನ್ಯಾಗೆ ಆಕೆಯ ಅತ್ತೆ ಮಗ ಮೊಬೈಲ್ ಖರೀದಿಸಿಕೊಟ್ಟಿದ್ದರು. ಆದರೆ ದಿನವಿಡೀ ಮೊಬೈಲ್‌ನಲ್ಲಿ ಆಡುತ್ತಿದ್ದುದನ್ನು ಗಮನಿಸಿದ ಪಾಲಕರು ಕಿವಿಮಾತು ಹೇಳಿದ್ದರು. ಇದರಿಂದ ಮನನೊಂದ ಸೌಜನ್ಯಾ ಜುಲೈ 22ರಂದು ರಾತ್ರಿ ವಿಷ ಸೇವಿಸಿದಳು. ತಕ್ಷಣ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಜೀವ ಉಳಿಸಲು ಸಾಧ್ಯವಾಗಲಿಲ್ಲ. ಪಡುಬಿದ್ರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.






 

error: Content is protected !!
Scroll to Top