ನೀರಿನ ಹೊಂಡಕ್ಕೆ ಬಿದ್ದ ಕರುವಿನ ರಕ್ಷಣೆ ➤ ಯುವಕನ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ

(ನ್ಯೂಸ್ ಕಡಬ) newskadaba.com ಮಂಗಳೂರು,ಜು.16: ನೀರಿನ ಹೊಂಡಕ್ಕೆ ಬಿದ್ದು ಜೀವಣ್ಮರಣ ಸ್ಥಿತಿಯಲ್ಲಿದ್ದ ಕರುವೊಂದನ್ನು ದಾರಿಹೋಕರೊಬ್ಬರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಮಂಗಳೂರು ಹೊರವಲಯದ ತಣ್ಣೀರುಬಾವಿ ಬೀಚ್ ಗೆ ಹೋಗುವ ರಸ್ತೆ ಬದಿಯಲ್ಲಿ ಈ ಘಟನೆ ನಡೆದಿದೆ.

ಗುತ್ತಿಗೆ ಕಾರ್ಮಿಕರು ತೋಡಿದ ಗುಂಡಿಗೆ ಕರುವೊಂದು ಬಿದ್ದಿತ್ತು, ಅದೇ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ನಿಖಿಲ್ ಪೂಜಾರಿ ಈ ಸುದ್ದಿ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿ ನೀರು ತುಂಬಿದ ಹೊಂಡಕ್ಕೆ ಇಳಿದು ಒದ್ದಾಡುತ್ತಿದ್ದ ಕರುವನ್ನ ಮೇಲೆಕೆತ್ತಿ ರಕ್ಷಣೆ ಮಾಡಿದ್ದಾರೆ.ಇವರಿಗೆ ಸ್ಥಳೀಯ ಯುವಕರು , ಅಗ್ನಿ ಶಾಮಕ ದಳದವರು ಸಹಕರಿಸಿದ್ದಾರೆ. ಕರುವಿಗೆ ಮರು ಜೀವ ಕೊಟ್ಟ ನಿಖಿಲ್ ಪೂಜಾರಿ ಗೆ ಹಾಗೂ ಸ್ಥಳೀಯ ಯುವಕರ ಗೋ ಪ್ರೇಮಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

 

Also Read  ಉಳ್ಳಾಲ: ಜ್ವರದಿಂದ ಬಳಲುತ್ತಿದ್ದ ಬಾಲಕ ಮೃತ್ಯು..!

error: Content is protected !!
Scroll to Top