ಪುತ್ತೂರು: ಪ್ರಥಮ ಕೊವೀಡ್ ಸೋಂಕಿತ ವ್ಯಕ್ತಿ ಗುಣಮುಖ

(ನ್ಯೂಸ್ ಕಡಬ) newskadaba.com ಸುಳ್ಯ,ಜೂ.29: ನಗರ ಸಭೆ ವ್ಯಾಪ್ತಿಯಲ್ಲಿ ಪ್ರಥಮ ಕೊರೋನಾ ಪ್ರಕರಣ ಬೆಳಕಿಗೆ ಬಂದಿದ್ದ ನಗರಸಭಾ ಸದಸ್ಯೆಯ ಮಾನವಾದ ಚಿಕ್ಕಮುಡ್ನೂರು ನಿವಾಸಿಯೊಬ್ಬರು ಗುಣಮುಖರಾಗಿ ಮನೆಗೆ ಸೇರಿದ್ದಾರೆ. ಜೂ. 20 ರಂದು ಅವರಿಗೆ ಕೊರೋನಾ ದೃಢಗೊಂಡ ಕುರಿತು ವರದಿ ಬಂದಿದ್ದು, ಇದೀಗಾ 7 ದಿನಗಳ ಬಳಿಕ ಅವರ ವರದಿಯಲ್ಲಿ ಕೊರೋನಾ ನೆಗೆಟಿವ್ ಆಗಿರುವ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ್ದಾರೆ.

 

 

ಜ್ವರ ಶೀತ , ಕೆಮ್ಮು ಭಾದೆಯಿಂದ ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಜೂ. 18 ರಂದು ವ್ಯಕ್ತಿಯೊಬ್ಬರ ಗಂಟಲು ದ್ರವ ಮಾದರಿಯ ಪರೀಕ್ಷೆಯಲ್ಲಿ ಕೊರೋನಾ ಸೋಂಕು ದೃಢ ಪಟ್ಟಿತ್ತು. ಅವರನ್ನ ಮಂಗಳೂರಿನ ಕೊವೀಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗಾ ಮಂಗಳೂರು ಕೊವೀಡ್ ಆಪ್ಪತ್ರೆಯಲ್ಲಿದ್ದ ವ್ಯಕ್ತಿಯ ಗಂಟಲು ದ್ರವ ಮಾದರಿಯನ್ನು 7 ದಿನಗಳ ಬಳಿಕ ಮತ್ತೊಮ್ಮೆ ಪರೀಕ್ಷೆ ಮಾಡಿದ ವೇಳೆ ವ್ಯಕ್ತಿಯ ವರದಿ ನೆಗೆಟಿವ ಬಂದಿದೆ. ಹಾಗಾಗಿ ಅವರನ್ನ ಆಸ್ಪತ್ರೆಯಿಂದ ಮನೆಗೆ ಕಳುಹಿಕೊಟ್ಟಿದ್ದಾರೆ. ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಪ್ರಥಮ ಕೊರೋನಾ ಪ್ರಕರಣ ಕೇಸ್ ಇದಾಗಿತ್ತು. ಸದ್ಯ ದ ಮಟ್ಟಿಗೆ ಸ್ಪಲ್ಪ ಮಟ್ಟಿಗೆ ಆತಂಕ ದೂರವಾಗಿದೆ.

Also Read  ಬೆಳ್ತಂಗಡಿ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ನವವಿವಾಹಿತೆ ಮೃತ್ಯು

 

 

 

error: Content is protected !!
Scroll to Top