ಸೂರ್ಯಗ್ರಹಣದ ಹಿನ್ನಲೆ ➤ ಉಡುಪಿ ಪೊಲಿಪು ಜಾಮಿಯ ಮಸೀದಿಯಲ್ಲಿ ವಿಶೇಷ ನಮಾಜ್..!!

(ನ್ಯೂಸ್ ಕಡಬ) newskadaba.com ಉಡುಪಿ, ಜೂ.22,. ಸೂರ್ಯಗ್ರಹಣದ ಸಂದರ್ಭದಲ್ಲಿ ಕಾಪುವಿನ ಪೊಲಿಪು ಜಾಮಿಯ ಮಸೀದಿಯಲ್ಲಿ ವಿಶೇಷ ನಮಾಝ್ ಮತ್ತು ದುವಾ ಪ್ರಾರ್ಥನೆ ರವಿವಾರ ನಡೆಯಿತು.


ಮಸೀದಿ ಖತೀಬರಾದ ಇರ್ಷಾದ್ ಸಅದಿ ನಮಾಝ್ ನೇತೃತ್ವವನ್ನು ವಹಿಸಿದ್ದರು. ಬಳಿಕ ಮಾತನಾಡಿದ ಅವರು, ಜನರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಿದ ಪ್ರವಾದಿಯವರು ಸೂರ್ಯ ಮತ್ತು ಚಂದ್ರನು ಅಲ್ಲಾಹನ ಅನುಗ್ರಹವಾಗಿದೆ. ಸೂರ್ಯಗ್ರಹಣದ ದಿವಸ ಅಲ್ಲಾಹುವಿನ‌ ಅನುಗ್ರಹವನ್ನು ಸ್ಮರಿಸುವ ಪ್ರಯುಕ್ತ ಮುಸಲ್ಮಾನರು ನಮಾಝ್ ನಿರ್ವಹಿಸುತ್ತಾರೆ. ಆದರೆ ಗ್ರಹಣದಿಂದ ವಿಪತ್ತು, ಆಪತ್ತು ಎದುರಾಗುತ್ತದೆ ಎಂಬ ಮೂಢನಂಬಿಕೆಯನ್ನು ಇಸ್ಲಾಂ ವಿರೋಧಿಸುತ್ತದೆ ಎಂದರು.

error: Content is protected !!
Scroll to Top