ಕೊಯಿಲ: ಸಬಳೂರು ಶ್ರೀರಾಮ ಭಜನಾ ಮಂಡಳಿ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

(ನ್ಯೂಸ್ ಕಡಬ) newskadaba.com ಕಡಬ, ಜೂ.21. ಕಡಬ ತಾಲೂಕು ಕೊಯಿಲ ಗ್ರಾಮದ ಸಬಳೂರು ಅಯೋದ್ಯನಗರ ಶ್ರೀ ರಾಮ ಭಜನಾ ಮಂಡಳಿ ವತಿಯಿಂದ ಲಡಕ್ ಗಡಿ ಭಾಗದಲ್ಲಿ ಚೀನಾ ಯೋಧರೊಂದಿಗೆ ಹೋರಾಡಿ ದೇಶಕ್ಕಾಗಿ ಬಲಿದಾನಗೈದಿರುವ ನಮ್ಮ ದೇಶದ ಇಪ್ಪತ್ತು ವೀರ ಯೋಧರಿಗೆ ಶ್ರದ್ದಾಂಜಲಿ ಕಾರ್ಯಕ್ರಮ ಶನಿವಾರ ಭಜನಾ ಮಂದಿರದಲ್ಲಿ ನಡೆಯಿತು.


ವೀರ ಮರಣವನ್ನಪ್ಪಿದ ಯೋಧರಿಗೆ ನುಡಿನಮನ ಸಲ್ಲಿಸಿ, ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.


ಆಲಂಕಾರು ಸಿ . ಎ ಬ್ಯಾಂಕ್ ನಿರ್ದೇಶಕ ರಾಮಚಂದ್ರ ನಾಯ್ಕ ಏಣಿತ್ತಡ್ಕ, ಶ್ರೀ ರಾಮ ಭಜನಾ ಮಂದಿರದ ಗೌರವ ಸಲಹೆಗಾರ ರಾಜೀವ ಪಟ್ಟೆದಮೂಲೆ, ಗೌರವಾಧ್ಯಕ್ಷ ಪರಮೇಶ್ವರ ಎಸ್ ಸಬಳೂರು, ಕೋಶಾಧಿಕಾರಿ ಪ್ರವೀಣ್ ರಾಜ್ ಕೊಲ್ಯ , ಕಾರ್ಯದರ್ಶಿ ಜಗದೀಶ ಸಬಳೂರು, ಉಪಾಧ್ಯಕ್ಷ ಪ್ರವೀಣ್ ಸೀಗೆತ್ತಡಿ, ಮುಖರಾದ ಉಮೇಶ್ ಬುಡಲೂರು, ನಾಗೇಶ್ ಕಡೆಂಬ್ಯಾಲು, ಚಿದಾನಂದ ಪಾನ್ಯಾಲು ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top