ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ➤ ಚಾಲಕ ಗಂಭೀರ…!

(ನ್ಯೂಸ್ ಕಡಬ) newskadaba.com ಭಟ್ಕಳ, ಜೂ.18., ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಲ್ಟಿಯಾಗಿ 6 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೈಲೂರ ಪಂಚಾಯತ್ ವ್ಯಾಪ್ತಿಯ ಗುಡಿಗದ್ದೆ ಕ್ರಾಸ್ ನಲ್ಲಿ ಜರುಗಿದೆ.


ಹೊನ್ನಾವರ ತಾಲೂಕಿನ ಮಂಕಿ ನವಾಯತ್ ಕಾಲನಿಯಿಂದ ಮುರ್ಡೇಶ್ವರಕ್ಕೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ವಾಹನ ಗುಡಿಗದ್ದೆ ಕ್ರಾಸ್ ಸಮೀಪದ ಕಿರುಬಚ್ಚಲು ಸೇತುವೆ ಸಮೀಪ ತಿರುವಿನಲ್ಲಿ ಪಲ್ಟಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನುಜ್ಜುಗೊಂಡಿದೆ.

ಅಪಘಾತದಲ್ಲಿ ಕಾರು ಚಾಲಕ ಗಂಭೀರ ಗಾಯಗೊಂಡಿದ್ದಾರೆ.

Also Read  ಕೊನೆಗೂ ಅಂತ್ಯ ಕಂಡ ಪಂಚಾಯತಿ ನೌಕರರ ಮುಷ್ಕರ- ಸಂಧಾನ ಸಭೆ ಯಶಸ್ವಿ

ಚಾಲಕ ಸೇರಿ 6 ಮಂದಿ ಈ ಕಾರಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು ಗಾಯಾಳುಗಳನ್ನು ಮುರ್ಡೇಶ್ವರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top