ಉಳ್ಳಾಲ ನೇತ್ರಾವತಿ ನದಿ ತೀರದಲ್ಲಿ ಯುವಕನ ಶವ ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.10: ಮಂಗಳೂರು ಹೊರವಲಯದ ಉಳ್ಳಾಲ ನೇತ್ರಾವತಿ ನದಿ ತೀರದಲ್ಲಿ ಯುವಕನ ಶವ ಪತ್ತೆ ನಿಗೂಢ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿ ಈ ಶವ ಪತ್ತೆಯಾಗಿದೆ. ಶವದ ಗುರುತು ಪತ್ತೆ ಮಾಡಲಾಗಿದ್ದು ಕೊಲ್ಯ ಸಾರಸ್ವತ ಕಾಲೊನಿ ನಿವಾಸಿ ಚೇತನ್ ಆಚಾರ್ಯ (33) ಎಂದು ಗುರುತ್ತಿಸಲಾಗಿದೆ.ಎರಡು ದಿನದ ಹಿಂದೆ ಮನೆಯಿಂದ ಹೊರಟಿದ್ದ ಚೇತನ್ ಬಳಿಕ ನಾಪತ್ತೆಯಾಗಿದ್ದ.

ಈ ಹಿನ್ನೆಲೆಯಲ್ಲಿ  ಇಂದು ಬೆಳಿಗ್ಗೆ ಚೇತನ್ ನಾಪತ್ತೆ ಬಗ್ಗೆ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಾನಸಿಕ ಖಿನ್ನತೆಯಿಂದ ಚೇತನ್ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕೆ ವ್ಯಕ್ತವಾಗಿದೆಯಾದರೂ. ಉಳ್ಳಾಲ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

error: Content is protected !!

Join the Group

Join WhatsApp Group