ಅಡಿಕೆ ಬೆಳೆಗಾರರ ಹಿತರಕ್ಷಣೆ ಮಾಡುವಲ್ಲಿ ಕ್ಯಾಂಪ್ಕೊ ಯಶಸ್ವಿ ➤ ಸತೀಶ್ಚಂದ್ರ

(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.9: ಕೊರೋನ ಲಾಕ್ ಡೌನ್ ಸಂದರ್ಭದಲ್ಲಿ ಕ್ಯಾಂಪ್ಕ್ಕೊ ಸಂಸ್ಥೆಯು ಬೆಳೆಗಾರರ ಮತ್ತು ನೌಕರರ ಹಿತರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಸಂಸ್ಥೆಯ 2 ಸಾವಿರ ಉದ್ಯೋಗಿಗಳಿಗೆ ಲಾಕ್ ಡೌನ್ ಸಂದರ್ಭದಲ್ಲಿ ಯಾವುದೇ ಕಡಿತ ಮಾಡದೆ ವೇತನವನ್ನು ಕ್ಲಪ್ತ ಸಮಯದಲ್ಲಿ ಪಾವತಿಸಿದೆ. 8 ಸಾವಿರ ಕ್ವಿಂಟಾಲ್ ಅಡಿಕೆಯನ್ನು ಬೆಳೆಗಾರರಿಂದ ಖರೀದಿಸಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ತಿಳಿಸಿದ್ದಾರೆ. ಅವರು ನಗರದ ಪ್ರತಿಕಾಭವನದಲ್ಲಿಂದು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಮಾಧ್ಯಮ ಸಂವಾದ ಗೋಷ್ಠಿಯನ್ನುದ್ದೇಶಿ ಮಾತನಾಡುತ್ತಿದ್ದರು.

 

 

ಕ್ಯಾಂಪ್ಕೋ ಎಪ್ರಿಲ್ 13ರಿಂದ ವಾರದಲ್ಲಿ ಒಂದು ದಿನ ಕೋಕೋ ಖರೀದಿ ಮತ್ತು ದಿನವೊಂದಕ್ಕೆ ಮೂವತ್ತು ಸದಸ್ಯರಿಂದ ಒಂದು ಕ್ವಿಂಟಾಲ್ ಅಡಿಕೆಯನ್ನು ಖರೀಸಿದೆ. ಬಳಿಕ ತಿಂಗಳಿಗೆ ಎರಡು ಕ್ವಿಂಟಾಲ್ ಹಾಗೂ ನಂತರ 5 ಕ್ವಿಂಟಾಲ್‌ವರೆಗೆ ಉತ್ತಮ ದರ ನೀಡಿ ಖರೀಸಿದೆ. ಕರ್ನಾಟಕ, ಕೇರಳದಲ್ಲೂ ಅಡಿಕೆ, ಕೋಕೋ ಖರೀದಿ ಮಾಡಲಾಗಿದೆ. ಮಳೆಗಾಲದಲ್ಲಿ ಅಡಿಕೆ ಬೆಳೆಗಾರರಿಗೆ ಕಾಡುವ ಕೊಳೆ ರೋಗದಂತಹ ರೋಗಗಳನ್ನು ತಡೆಯಲು ಸಿಂಪಡಿಸುವ ಔಷಧಿ ಗಾಗಿ ಉತ್ತಮ ಗುಣಮಟ್ಟದ ಮೈಲು ತುತ್ತವನ್ನು ಸಬ್ಸಿಡಿ ದರದಲ್ಲಿ ರೈತರಿಗೆ ನೀಡಿದೆ ಎಂದು ಸತೀಶ್ಚಂದ್ರ ಹೇಳಿದ್ದಾರೆ.

 

error: Content is protected !!

Join the Group

Join WhatsApp Group