ನಿಶ್ಚಿತಾರ್ಥದ ಹಿಂದಿನ ದಿನ ಯುವಕನ ಮೃತ್ಯು ► ಕೊಲೆ ಶಂಕೆ

(ನ್ಯೂಸ್ ಕಡಬ) newskadaba.com ತುಮಕೂರು,ಸೆ.02, ಆಮಂತ್ರಣ ಹಂಚಲು ಹೋಗಿದ್ದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಹಾಗಲನಹಳ್ಳಿಯಲ್ಲಿ ಶನಿವಾರ ಬೆಳಕಿಗೆ ಬಂದಿದೆ.

ನಿಶ್ಚಿತಾರ್ಥದ ಮುನ್ನ ದಿನವೇ ಮೃತನಾದ ಯುವಕನನ್ನು 33 ವರ್ಷದ ಹಂಸಕುಮಾರ್ ಎಂದು ಗುರುತಿಸಲಾಗಿದೆ. ಶನಿವಾರ(ಇಂದು) ಬಾಗಲಕೋಟೆ ಯುವತಿಯೊಂದಿಗೆ ಹಂಸಕುಮಾರ್‍ಗೆ ನಿಶ್ಚಿತಾರ್ಥ ನಡೆಯಬೇಕಿತ್ತು. ಶುಕ್ರವಾರ ಆಮಂತ್ರಣ ಹಂಚಲು ಹೋಗಿದ್ದ ಹಂಸಕುಮಾರ್ ಕಾರಿನಲ್ಲಿ ಸುಟ್ಟು ಕರಕಲಾದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಹಳೆಯ ದ್ವೇಷದ ಹಿನ್ನಲೆಯಲ್ಲಿ ಹಂಸಕುಮಾರ್ರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ದಂಡಿನಶಿವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸಿದ್ದಾರೆ.

error: Content is protected !!

Join the Group

Join WhatsApp Group