ವೈದ್ಯರ ಎಡವಟ್ಟು ► ಕೈ ಕಳೆದುಕೊಂಡ 8 ವರ್ಷದ ಬಾಲಕಿ..!!!

(ನ್ಯೂಸ್ ಕಡಬ) newskadaba.com ಕೊಪ್ಪಳ, ಸೆ.01, ಮೊಣಕೈ ಮುರಿದುಕೊಂಡಿದ್ದ ಬಾಲಕಿಗೆ ವೈದ್ಯನೊಬ್ಬ ಶಸ್ತ್ರಚಿಕಿತ್ಸೆ ಮಾಡೋದಾಗಿ ಹೇಳಿ ಕೈ ಕತ್ತರಿಸಿ ಬಳಿಕ ಶಸ್ತ್ರ ಚಿಕಿತ್ಸೆಯನ್ನು ಅರ್ಧಕ್ಕೆ ಬಿಟ್ಟಿರೋ ಘಟನೆ ಗಂಗಾವತಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಇದರಿಂದಾಗಿ ಬಾಲಕಿಯ ಪೋಷಕರುಕರು ದಿಕ್ಕುತೋಚದೆ ಕಣ್ಣೀರಿಡ್ತಿದ್ದಾರೆ.

ಗಂಗಾವತಿ ತಾಲೂಕಿನ ಬಸವರಾಜ ಹಾಗೂ ಅಂಬಮ್ಮ ದಂಪತಿಯ 8 ವರ್ಷದ ಪುತ್ರಿ ಅಂಕಿತಾ ಮನೆಯಲ್ಲಿ ಬಿದ್ದು ಮೊಣಕೈ ಮುರಿದುಕೊಂಡಿದ್ದಳು. ಬಳಿಕ ಪೋಷಕರು ಅಂಕಿತಾಳನ್ನ ಕೊಪ್ಪಳದ ಜಿಲ್ಲಾಸ್ಪತ್ರೆಗೆ ಸೇರಿಸಿದ್ರು. ವೈದ್ಯರು ಮಾತ್ರ ಎಕ್ಸ್‍ರೇ ಮಾಡಿದ 4 ದಿನಗಳ ಬಳಿಕ ಅಂದ್ರೆ ಗುರುವಾರ ಆಪರೇಷನ್ ಶುರುಮಾಡಿದ್ದಾರೆ. ಇದೀಗ ತನ್ನಿಂದ ಆಪರೇಷನ್ ಮಾಡಲು ಆಗಲ್ಲ ಅಂತಾ ಡಾಕ್ಟರ್ ವಿಜಯ ಸಂಕದ ಅವರು ಬಾಲಕಿ ಕೈಗೆ ಬ್ಯಾಂಡೇಜ್ ಸುತ್ತಿ, ಬೇರೆ ಆಸ್ಪತ್ರೆಗೆ ಹೋಗಿ ಎಂದು ಹೇಳಿದ್ದಾರೆ. ನಾಲ್ಕೈದು ದಿನ ಕಳೆದ ಬಳಿಕ  ಡಾಕ್ಟರ್ ಹೀಗೆ ಹೇಳಿರುವುದರಿಂದ ಬಡ ಕುಟುಂಬದ ಪೋಷಕರು ಆತಂಕಕ್ಕಿಡಾಗಿದ್ದಾರೆ.

error: Content is protected !!

Join the Group

Join WhatsApp Group