ಇಂದು ಏಕ್ ಭಾರತ್ ಶೇಷ್ಠ್ ಭಾರತ್ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.24    ಭಾರತ ಸರ್ಕಾರ ಯುವಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ, ರಾಜ್ಯ ನೆಹರು ಯುವ ಕೇಂದ್ರ ಸಂಘಟನೆ ಹಾಗೂ ಯೆನಪೋಯ ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ಜಂಟಿಯಾಗಿ ಅಂತರ್ ರಾಜ್ಯ ಯುವ ವಿನಿಮಯ (ಇಂಟರ್ ಸ್ಟೇಟ್ ಯೂತ್ ಎಕ್ಸ್‍ಚೇಂಜ್ ಪ್ರೋಗ್ರಾಂ)ಕಾರ್ಯಕ್ರಮದಡಿ ‘ಏಕ್ ಭಾರತ್ ಶೇಷ್ಠ್ ಭಾರತ್’ ಕಾರ್ಯಕ್ರಮವನ್ನು ಜನವರಿ 24 ರಂದು ಮಧ್ಯಾಹ್ನ 2 ಗಂಟೆಗೆ ಯೆನಪೋಯ ವೈದ್ಯಕೀಯ ಕಾಲೇಜಿನ ಇ,ಎಮ್.ಡಿ ಬಿಲ್ಡಿಂಗ್‍ನ 8ನೇ ಮಹಡಿಯಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಸಂಸದ, ನಳಿನ್ ಕುಮಾರ್ ಕಟೀಲ್  ಉದ್ಘಾಟಿಸಲಿದ್ದಾರೆ. ಶಾಸಕ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸಲಿದ್ದಾರೆ.

error: Content is protected !!

Join the Group

Join WhatsApp Group