ಕಟೀಲು ರಸ್ತೆ ಅಭಿವೃದ್ಧಿ- ಸಂಚಾರ ಮಾರ್ಪಾಡು

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.17    ಕಟೀಲು ದೇವಸ್ಥಾನದ ಬ್ರಹ್ಮಕಲಶೋತ್ಸವ ನಿಮಿತ್ತ ಕ್ಷೇತ್ರಕ್ಕೆ ಬರುವ ಮುಖ್ಯ ರಸ್ತೆಯ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಸುಗಮ ರಸ್ತೆ ಸಂಚಾರ ನಿಟ್ಟಿನಲ್ಲಿ ಮಂಗಳೂರು-ಬಜಪೆ-ಕಟೀಲು ರಸ್ತೆಯಲ್ಲಿ ವಾಹನಗಳ ಸಂಚಾರದಲ್ಲಿ ತಾತ್ಕಾಲಿಕವಾಗಿ ಮಾರ್ಪಾಡು ಮಾಡಲಾಗಿದೆ.


ಮಂಗಳೂರಿನಿಂದ ಬಜಪೆ ಮಾರ್ಗವಾಗಿ ಬರುವ ವಾಹನಗಳು ಶಿಬರೂರು ದ್ವಾರದ ಬಳಿ ಎಡಕ್ಕೆ ತಿರುಗಿ ಶಿಬರೂರು ಜಂಕ್ಷನ್ -ಕಿನ್ನಿಗೋಳಿ – ಮೂರು ಕಾವೇರಿ ಮೂಲಕ ಕಟೀಲಿಗೆ ಆಗಮಿಸಬಹುದು. ಕಟೀಲಿನಿಂದ ಮಂಗಳೂರು ಹೋಗುವ ರಸ್ತೆ ಸಂಚಾರದಲ್ಲಿ ಯಾವುದೇ ಮಾರ್ಪಾಡಿಲ್ಲ ಎಂದು ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದ್ದಾರೆ.

error: Content is protected !!

Join the Group

Join WhatsApp Group