ಕೊಲ್ಲೂರು ಮೂಕಾಂಬಿಕೆ ಮಹಿಮೆ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150

ಕೊಡಚಾದ್ರಿ ಬೆಟ್ಟದ ಸುಂದರ ಕಾನನದ ನಿಸರ್ಗ ನಡುವೆ ತಾಯಿ ನೆಲೆಸಿದ್ದಾಳೆ. ಈ ಕ್ಷೇತ್ರವು ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿದೆ.
ಮಹಾಕಾಳಿ, ಮಹಾಸರಸ್ವತಿ, ಮಹಾಲಕ್ಷ್ಮಿ ಸ್ವರೂಪವಾಗಿ ಶ್ರೀಮೂಕಾಂಬಿಕೆ ತಾಯಿ ಭಕ್ತರ ಕಷ್ಟಕಾರ್ಪಣ್ಯಗಳನ್ನು ದೂರಮಾಡುವಳು.
ಕೋಲ ಮಹರ್ಷಿ ದಿವ್ಯ ತಪಸ್ಸಿಗೆ ಒಲಿದು ದೇವಿಯು ಬ್ರಾಹ್ಮೀ, ವೈಷ್ಣವೀ, ಶಾಂಭವೀ, ಕುಮಾರಿ, ಇಂದ್ರಾಣಿ, ವರಾಹಿ, ಎಲ್ಲರೊಡಗೂಡಿ ಮೂಕಾಸುರನ ಸಂಹರಿಸಿದಳು. ಇಲ್ಲಿ ಪೂಜೆ ಪುನಸ್ಕಾರಗಳು ಕೇರಳ ಪದ್ಧತಿಯಲ್ಲಿ ನಡೆಯುವುದು ವಿಶೇಷ. ಶಂಕರಾಚಾರ್ಯ ಧ್ಯಾನ ಮಾಡಿದ ಸ್ಥಳವನ್ನು ಶಂಕರ ಪೀಠ ಎಂದು ಕರೆಯಲಾಗುತ್ತದೆ. ಈ ಪವಿತ್ರ ಕ್ಷೇತ್ರದಲ್ಲಿ ಅಗ್ನಿ ತೀರ್ಥ ಮತ್ತು ಸೌಪರ್ಣಿಕ ನದಿಗಳು ಕೊಡಚಾದ್ರಿ ಬೆಟ್ಟದಲ್ಲಿ ಉದ್ಭವವಾಗುತ್ತದೆ.
ದುಷ್ಟಶಕ್ತಿ, ಪ್ರಯೋಗದೋಷ, ಶತ್ರುಬಾಧೆ, ಹಣಕಾಸು ಸಮಸ್ಯೆ ಇತ್ಯಾದಿ ದುಃಖ-ದುಮ್ಮಾನಗಳಿಗೆ ಚಂಡಿಕಾಯಾಗ ನಡೆಸುವ ಪ್ರಸಿದ್ಧ ಕ್ಷೇತ್ರವಾಗಿದೆ. ತಮ್ಮ ಇಷ್ಟಾರ್ಥ ನೆರವೇರಲು ಭಕ್ತಿಯಿಂದ ಸೇವೆ ಸಲ್ಲಿಸಿ. ತಾಯಿ ಪ್ರಸನ್ನಳಾಗಿ ನಿಮ್ಮ ಮನೋಭಿಲಾಷೆಗಳನ್ನು ಈಡೇರಿಸುವುದು ಖಂಡಿತ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ನಿಮ್ಮ ಸಮಸ್ಯೆಗಳ ಸಮಾಲೋಚನೆಗಾಗಿ ಇಂದೇ ಕರೆಮಾಡಿ ಮತ್ತು ಪರಿಹಾರ ಪಡೆದುಕೊಳ್ಳಿ.
9945410150

error: Content is protected !!

Join the Group

Join WhatsApp Group