ಮುದ್ದು ಕಂದಮ್ಮನನ್ನು ಮನೆಯಲ್ಲಿ ಬಿಟ್ಟು ►ಮಹಿಳೆಯೊಂದಿಗೆ ಪರಾರಿಯಾದ ಗೃಹಿಣಿ…!!!

(ನ್ಯೂಸ್ ಕಡಬ) newskadaba.com ಮಂಡ್ಯ, ಆ.23, ಗೃಹಿಣಿಯೊಬ್ಬರು ಅವಿವಾಹಿತ ಮಹಿಳೆಯೊಂದಿಗೆ ನಾಪತ್ತೆಯಾಗಿರುವ ವಿಚಿತ್ರ ಪ್ರಕರಣವೊಂದು ಶ್ರೀರಂಗಪಟ್ಟಣದ ಶ್ರೀನಿವಾಸ ಅಗ್ರಹಾರದಲ್ಲಿ ಬೆಳಕಿಗೆ ಬಂದಿದೆ.

 ಕಾಣೆಯಾದ ಮಹಿಳೆಯರನ್ನು ಪ್ರಿಯದರ್ಶಿನಿ(22) ಮತ್ತು ಮಾಹಾದೇವಿ(21) ಎಂದು ತಿಳಿದುಬಂದಿದೆ. ಪ್ರಿಯದರ್ಶಿನಿ ಅವರಿಗೆ ಮದುವೆಯಾಗಿದ್ದು, ಒಂದು ಮುದ್ದಾದ ಮಗುವನ್ನು ಸಹ ಹೊಂದಿದ್ದಾರೆ. ಆಗಸ್ಟ್ 22ರಿಂದ ಇಬ್ಬರೂ ಮಹಿಳೆಯರೂ ಅನುಮಾನಸ್ಪದವಾಗಿ ನಾಪತ್ತೆಯಾಗಿದ್ದಾರೆ.

ಕೆಲವು ದಿನಗಳಿಂದ ಪ್ರಿಯದರ್ಶಿನಿ ಮನೆಗೆ ಮಾಹಾದೇವಿ ಅವರು ಬಂದು ಹೋಗುತ್ತಿದ್ದರು. ಎಂದಿನಂತೆ ಅಗಸ್ಟ್ 22ರಂದು ಸಹ ಮಾಹಾದೇವಿಯವರು ಮನೆಗೆ ಬಂದು ಮಗುವಿಗೆ ಬಟ್ಟೆ ತಗೊಂಡು ಬರೋಣ ಎಂದು ಪ್ರಿಯದರ್ಶಿನಿಯರನ್ನು ಜೊತೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಂದು ಬಟ್ಟೆ ತರಲು ಹೋದವರು ಮರಳಿ ಮನೆಗೆ ವಾಪಾಸಾಗದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಅನುಮಾನಗೊಂಡ ಪ್ರಿಯದರ್ಶಿನಿ ತಾಯಿ ಮಹಾದೇವಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Also Read  ಉಡುಪಿ: ದೇವಸ್ಥಾನದ ಒಳಗೆ ನೇಣು ಬಿಗಿದು ಯುವಕ ಆತ್ಮಹತ್ಯೆ

ನನ್ನ ಪತ್ನಿಗೆ ಮಾಟ-ಮಂತ್ರ ಮಾಡಿಸಿ ಮಹಾದೇವಿ ಕರೆದುಕೊಂಡು ಹೋಗಿದ್ದಾಳೆ ಎಂದು ಪ್ರಿಯದರ್ಶಿನಿ ಪತಿ ನವೀನ್‍ಕುಮಾರ್ ಆರೋಪಿಸುತ್ತಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ನಾಪತ್ತೆಯಾಗಿರುವ ಮಹಾದೇವಿ ಮತ್ತು ಪ್ರಿಯದರ್ಶಿನಿಯ ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.

 

error: Content is protected !!
Scroll to Top