ಗುಲ್ಗೋಡಿಯಲ್ಲಿ ಅಯ್ಯಪ್ಪ ದೀಪೋತ್ಸವ

(ನ್ಯೂಸ್ ಕಡಬ) newskadaba.com, ಕಡಬ, ಜ.1  ಕಡಬ ತಾಲೂಕಿನ ಕೊೈಲ ಗ್ರಾಮದ ಗುಲ್ಗೋಡಿಯಲ್ಲಿ ಇಲ್ಲಿನ ಅಯ್ಯಪ್ಪ ಭಕ್ತವೃಂದ ಆಶ್ರಯದಲ್ಲಿ ಎರಡನೇ ವರ್ಷದ ಅಯ್ಯಪ್ಪ ದೀಪೋತ್ಸವ ಹಾಗೂ ಅಪ್ಪ ಸೇವೆ ಸೋಮವಾರ ರಾತ್ರಿ ನಡೆಯಿತು.


ಬಾಬು ಗುರುಸ್ವಾಮಿ ನೇತೃತ್ವದಲ್ಲಿ ಅಯ್ಯಪ್ಪ ವೃತದಾರಿಗಳಿಗೆ ಅಪ್ಪ ಸೇವೆ ನಡೆಯಿತು. ಕುದಿಯುವ ಎಣ್ಣೆಯಿಂದ ಅಪ್ಪ ತೆಗೆಯುವ ಸೇವೆಯನ್ನು ಸುಮಾರು 25 ಕ್ಕೂ ಹೆಚ್ಚು ಮಾಲಾಧಾರಿಗಳು ನೇರವೇರಿಸಿದರು. ಇದೇ ವೇಳೆ ಪುತ್ತೂರು ಚಂದ್ರಶೇಖರ ಹೆಗ್ಡೆ ನಿರ್ದೆಶನದ ಪುನೀತ್ ಆರ್ಕೆಸ್ಟ್ರಾ ಅವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಬಳಿಕ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ನಾಗನಂದಿನಿ ಎಂಬ ಯಕ್ಷಗಾನ ಬಯಲಾಟ ನಡೆಯಿತು. ಈ ಸಂದರ್ಭದಲ್ಲಿ ಕೃಷ್ಣ ಪೂಜಾರಿ ಗುಲ್ಗೋಡಿ, ಶೇಖರ ಪೂಜಾರಿ ಗುಲ್ಗೋಡಿ, ಲಲಿತಾ ಗುಲ್ಗೋಡಿ, ಗಂಗಯ್ಯ ಪೂಜಾರಿ ಗುಲ್ಗೋಡಿ, ದೀಕ್ಷಿತ್ ಎನ್ ಮತ್ತಿತರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group