ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದ ತಂದೆ-ಮಗ ►20 ವರ್ಷಗಳ ನಂತರ ಮರಳಿ ಗೂಡಿಗೆ

(ನ್ಯೂಸ್ ಕಡಬ) newskadaba.com ಮೈಸೂರು, ಆ.22, ಕಾರಣಾಂತರಗಳಿಂದ 20 ವರ್ಷಗಳ ಹಿಂದೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದ ಮಂಡ್ಯ ಜಿಲ್ಲೆಯ ಸೈಯದ್ ಅಬ್ಬಾಸ್ ಮತ್ತು ಅವರ ಪುತ್ರ ಸೈಯದ್ ಅತಿಕ್ ಅವರು ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದಾರೆ.

ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ಮೈಸೂರಿನ ದೇವರಾಜ ಮೊಹಲ್ಲಾದ ಆರ್ಯ ಭವನದಲ್ಲಿ “ಘರ್ ವಾಪಸಿ” ಕಾರ್ಯಕ್ರಮ ನಡೆಯಿತು. ಮೂಲತಃ ಹಿಂದೂ ಧರ್ಮದವರಾಗಿದ್ದ ಸೈಯದ್ ಅಬ್ಬಾಸ್ ಕಾರ್ಯಕ್ರಮದಲ್ಲಿ ಮುಸ್ಲಿಂ ಧರ್ಮವನ್ನು ತ್ಯಜಿಸಿ ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ಸಾದರು
ಸಾಂಪ್ರದಾಯಿಕವಾಗಿ ಜನಿವಾರ ಧರಿಸಿ ಹೋಮ, ಹವನ ನೆರವೇರಿಸಿದ ಇವರು, ತಮ್ಮ ಮೂಲ ಹೆಸರಾದ ಶೇಷಾದ್ರಿ ಮತ್ತು ಹರ್ಷಲ್ ಆರ್ಯ ಎಂದು ಹಿಂದೂ ಧರ್ಮದ ಹೆಸರುಗಳನ್ನ ಮರು ನಾಮಕರಣ ಮಾಡಿಕೊಂಡರು

ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ದೇಶದಲ್ಲಿರುವ ಮುಸ್ಲಿಮರು ಮೂಲತಃ ನೈಜ ಮುಸ್ಲಿಮರಲ್ಲ. ಅಂದಿನ ಆಳರಸರ ಕಾಲದಲ್ಲಿ ಹಿಂದೂಗಳನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದರು.

error: Content is protected !!
Scroll to Top