ಶ್ರೀರಾಮ ಶಾಲೆಯಲ್ಲಿ ಜನಾರ್ಧನ ರೆಡ್ಡಿ ► ರೂ.26 ಲಕ್ಷ ದೇಣಿಗೆ

(ನ್ಯೂಸ್ ಕಡಬ) newskadaba.com ಕಲ್ಲಡ್ಕ, ಆ .22, ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರ ಶ್ರೀರಾಮ ಶಾಲೆಗೆ ಕೊಲ್ಲೂರು ದೇವಾಲಯದ ದತ್ತು ರದ್ದು ಪಡಿಸಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಶಾಲೆಗೆ ಮಂಗಳವಾರ ಭೇಟಿ ನೀಡಿದ್ದಾರೆ.

ಈ ಶಾಲೆಗೆ ಸರ್ಕಾರ ಅನುದಾನ ಕೊಡದಿದ್ದರೂ ಪರವಾಗಿಲ್ಲ, ಅವರ ಶಾಲೆಯನ್ನ ಉಳಿಸಲು ನಾನು ಮತ್ತು ನನ್ನ ಗೆಳೆಯರು ಸೇರಿ ಶಾಲೆಗೆ 26 ಲಕ್ಷ ನೀಡುವುದರ ಮೂಲಕ ಭಿಕ್ಷಾಂದೇಹಿ ಆಂದೋಲನಕ್ಕೆ ಬೆಂಬಲಿಸುತ್ತೇವೆ  ಎಂದು ಹೇಳಿದ್ದಾರೆ.

ಬೆಳಗ್ಗೆ ಶಾಲಾ ಪ್ರಾರ್ಥನ ಸಮಯದಲ್ಲಿ ಕಲ್ಲಡ್ಕ ಶಾಲೆಯಲ್ಲಿ ಹಾಜರಿದ್ದ ರೆಡ್ಡಿ, ಶಾಲಾ ವಠಾರವನ್ನು ವೀಕ್ಷಿಸಿ ಕಲ್ಲಡ್ಕ ಪ್ರಭಾಕರ ಭಟ್ ಅವರೊಂದಿಗೆ ಸಮಾಲೋಚನೆ ನಡೆಸಿದರು. 13ವರ್ಷಗಳ ಬಳಿಕ ಭೇಟಿ ನೀಡಿದ ಜನಾರ್ಧನ ರೆಡ್ಡಿಯವರು ತಮ್ಮ ಹಾಗೂ ತಮ್ಮ ಗೆಳೆಯರ ವತಿಯಿಂದ ಭಿಕ್ಷಾಂದೇಹಿ ಅಭಿಯಾನಕ್ಕೆ 26 ಲಕ್ಷ ರೂ.ಗಳ ದೇಣಿಗೆಯ ಚೆಕ್‌ನ್ನು ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಹಸ್ತಾಂತರಿಸಿದರು.

error: Content is protected !!

Join WhatsApp Group

WhatsApp Share