ಸಂಚಾರಿ ನಿಯಮಗಳ ಜನಜಾಗೃತಿ ಕಾರ್ಯಾಗಾರ

(ನ್ಯೂಸ್ ಕಡಬ) newskadaba.com   ನೆಲ್ಯಾಡಿ, ನ.7    ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನ ಸಿಲ್ವರ್ ಜೂಬಿಲಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮತ್ತು ಜ್ಞಾನೋದಯದ ಸ್ಕೌಟ್ ಗೈಡ್ಸ್ ನ ವತಿಯಿಂದ ಸೋಮವಾರ ಸಂಚಾರಿ ನಿಯಮಗಳ ಜನಜಾಗೃತಿ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಸಂಸ್ಥೆಯ ಪ್ರಾಂಶುಪಾಲರಾದ ರೆ|ಫಾ| ಮ್ಯಾಥ್ಯೂ ಪ್ರಫುಲ್ ಒ.ಐ.ಸಿ. ಯವರು ಹದಿಹರೆಯದ ಯುವಕ ಯುವತಿಯರು ರಸ್ತೆ ಕಾನೂನುಗಳನ್ನು ಉಲಂಘನೆ ಮಾಡುತ್ತಾರೆ. ಸುರಕ್ಷಿತ ಚಾಲನೆಯನ್ನು ನಿರ್ವಹಿಸಿದರೆ ಅಪಘಾತ ನಡೆಯುವುದಿಲ್ಲ. ಈ ಸುರಕ್ಷತೆಯ ಜಾಗೃತಿ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಸಂಸ್ಥೆಯ ಖಜಾಂಚಿಯಾದ ರೆ|ಫಾ| ಐಸಕ್ ಸಾಮ್ ಒ.ಐ.ಸಿ ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸುದರಿಂದ ರಸ್ತೆ ಅಪಘಾತಗಳು ನಡೆಯುವುದಿಲ್ಲ. ಸಂಚಾರಿ ನಿಯಮಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಿ ಎಂದು ಒತ್ತು ನೀಡಿ ಹೇಳಿದರು.

Also Read  ಉಡುಪಿ: ಭಿಕ್ಷೆ ಬೇಡಿ ಮಗುವಿನ‌ ಚಿಕಿತ್ಸೆಗೆ ನೆರವಾದರು ಮಂಗಳಮುಖಿಯರು

ಜನಜಾಗೃತಿ ಕಾರ್ಯಕ್ರಮವನ್ನು ಪುತ್ತೂರು ಸರ್ಕಲ್ ಇನ್‍ಸ್ಪೆಕ್ಟರ್ ನಾಗೇಶ್ ಕದ್ರಿ, ಪುತ್ತೂರು ಟ್ರಾಫಿಕ್ ಪಿ ಎಸ್ ಐ ಚೆಲುವಯ್ಯ ಇವರು ಮದ್ಯ ವ್ಯಸನ, ಲೈಂಗಿಕ ದೌರ್ಜನ್ಯ ಮತ್ತು ರಸ್ತೆ ನಿಯಮಗಳ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಯಶಸ್ವಿಯಾಗಿ ನಿರ್ವಹಿಸಿದರು. ವೇದಿಕೆಯಲ್ಲಿ ಪುತ್ತೂರು ಟ್ರಾಫಿಕ್ ಹೆಡ್‍ಕೋನ್‍ಸ್ಟಬ್‍ಲ್ ಶಿವಪ್ರಸಾದ್ ಬುಡ್ರಿ ನಾಗರಾಜ್ ಮತ್ತು ಉಪ್ಪಿನಂಗಡಿ ಪೊಲೀಸ್ ಕಾನ್‍ಸ್ಟಬ್‍ಲ್ ಹಿತೋಶ್ ಕುಮಾರ್ ಉಪಸ್ಥಿತರಿದ್ದರು.

Also Read  ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆ ಸಾಧ್ಯತೆ

error: Content is protected !!
Scroll to Top