ಕಲ್ಲುಗುಡ್ಡೆ: ಕುಸಿದು ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಆ .19, ಇಲ್ಲಿನ ಕಲ್ಲುಗುಡ್ಡೆ ಸಮೀಪದ ನೂಜಿ ರೆಂಜಿಲಾಡಿ ಮಾರಪ್ಪೆ ನಿವಾಸಿ ಕುಂಞಣ್ಣ ಗೌಡ ಎಂಬವರ ಪುತ್ರ ಜಿನ್ನಪ್ಪ ಗೌಡ(47) ತನ್ನ ತೋಟದಲ್ಲಿ ಕುಸಿದುಬಿದ್ದು ಮೃತಪಟ್ಟ ಘಟನೆ ಶನಿವಾರಂದು ಕಂಡುಬಂದಿದೆ.

ಪಕ್ಷವಾತ ಖಾಯಿಲೆಗೆ ತುತ್ತಾಗಿದ್ದ ಜಿನ್ನಪ್ಪ ಗೌಡರು ಗುಣಮುಖಗೊಂಡಿದ್ದು, ಶುಕ್ರವಾರದಂದು ಕಡಬ ಪೇಟೆಗೆ ಬಂದಿದ್ದರೆನ್ನಲಾಗಿದೆ. ಶುಕ್ರವಾರ ರಾತ್ರಿ ಮನೆಯಿಂದ ಹೊರಹೋಗಿದ್ದ ಅವರು ತನ್ನ ತೋಟದ ಕೆರೆಯ ಸಮೀಪ ಕುಸಿದುಬಿದ್ದಿದ್ದು, ರಾತ್ರಿಯಿಂದ ಮನೆಯವರೆಲ್ಲ ಹುಡುಕಾಡಿದ್ದಾರೆನ್ನಲಾಗಿದೆ. ಆದರೆ ಶನಿವಾರದಂದು ಮಧ್ಯಾಹ್ನ ತೋಟದಲ್ಲಿ ಕೆರೆಯ ಸಮೀಪ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದರೆನ್ನಲಾಗಿದೆ. ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

error: Content is protected !!
Scroll to Top