ವೆನ್ ಲಾಕ್ ➤ ನಾಡೋಜ ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಉಡುಪಿ ವತಿಯಿಂದ ಸನ್ಮಾನ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು,ಅಕ್ಟೋಬರ್.10.ನಾಡೋಜ ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಉಡುಪಿ ವತಿಯಿಂದ ವೆನ್‍ಲಾಕ್ ಆಸ್ಪತ್ರೆಯ ಸಿಬ್ಬಂದಿ ಬಿ. ಶೇಷಪ್ಪ ಬಂಬಿಲ ಅವರನ್ನು ಇತ್ತೀಚೆಗೆ ಸನ್ಮಾನಿಸಲಾಯಿತು.

Gems


ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯ ಆಡಳಿತ ವಿಭಾಗದಲ್ಲಿ ವಿಷಯ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ಸಮಾಜಮುಖಿ ಸೇವಾ ಮನೋಭಾವದ ಬಿ. ಶೇಷಪ್ಪ ಬಂಬಿಲ ಇವರು ರೋಗಿಗಳ ಪಟ್ಟಿ ತಯಾರಿಸಿ ಕ್ಲಪ್ತ ಸಮಯಕ್ಕೆ ಫಲಾನುಭವಿಗಳಿಗೆ ಮುಟ್ಟಿಸುವ ಕಾರ್ಯದಲ್ಲಿ ಪ್ರತಿವರ್ಷ ಸಫಲರಾಗಿದ್ದಾರೆ. ಇವರ ಸೇವೆಗೆ ಸಂಸ್ಥೆಯ ಸಾಧನಾ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಡಾ. ಜಿ. ಶಂಕರ್, ಸಂಸ್ಥೆಯ ಟ್ರಸ್ಟಿಗಳಾದ, ಎಸ್. ಕೆ. ಆನಂದ, ಹಾಗೂ ಶಂಕರ್ ಸಾಲಿಯಾನ್, ಮಾನವ ಹಕ್ಕು ಫೆಡರೇಶನ್ ಆಫ್ ಇಂಡಿಯಾದ ಕೊಲ್ಲಾಡಿ ಬಾಲಕೃಷ್ಣ ರೈ, ದ.ಕ ಮಾನವ ಹಕ್ಕು ಒಕ್ಕೂಟದ ಜಿಲ್ಲಾ ಅಧ್ಯಕ್ಷರಾದ ವಸಂತ ಶೆಟ್ಟಿ.

Also Read  ಸರ್ವೆ: ಮನೆಯ ಕಿಟಕಿ ಮುರಿದು ನಗ-ನಗದು ಕಳವು

ವೆನ್ಲಾಕ್ ಆಸ್ಪತ್ರೆಯ ಡಾ. ರಾಜೇಶ್ವರಿ ದೇವಿ,ಡಾ. ಜುಲಿಯಾನ ಸಲ್ಡಾನ ಆರ್.ಎಂ.ಓ. ಹಾಗೂ ಹಲವಾರು ಹಿರಿಯ ವೈದ್ಯಾಧಿಕಾರಿ ಮತ್ತು ನರ್ಸಿಂಗ್ ಸೂಪರಿಂಟೆಂಡೆಂಟ್ ಉಪಸ್ಥಿತರಿದ್ದರು. ಹಿರಿಯ ತಜ್ಞರಾದ ಡಾ. ಶಿವಪ್ರಕಾಶ್ ಸಂದರ್ಭೊಚಿತವಾಗಿ ಡಾ .ಜಿ ಶಂಕರ್‍ರವರ ಕುರಿತು ಮಾತಾಡಿದರು.ಬಿ ಶೇಷಪ್ಪ ಇವರು ಈಗಾಗಲೇ ಮಾನವ ಹಕ್ಕು ಫೆಡರೇಶನ್ ಆಪ್ ಇಂಡಿಯಾದವರಿಂದ 2014 ರಲ್ಲಿ ‘ಸಾಧನಾ ಪ್ರಶಸ್ತಿ’ 2016 ರಲ್ಲಿ ಸರಕಾರಿ ಸೇವೆಯಲ್ಲಿ ‘ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿ,’ ಕರ್ನಾಟಕ ರಾಜ್ಯ ಡಿ. ದರ್ಜೆ ನೌಕರರ ಜಿಲ್ಲಾ ಸಂಘ, ದ.ಕ. ಇವರಿಂದ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಜಿಲ್ಲಾ ಸಂಘದಿಂದ ಸನ್ಮಾನ ಹಾಗೂ ಸರಕಾರಿ ಅಧಿಕಾರಿಗಳ ಬ್ಯಾಂಕಿನ 100ನೇ ವಾರ್ಷಿಕೋತ್ಸವದಲ್ಲಿ ‘ಸಾಹಿತ್ಯ ಪ್ರಶಸ್ತಿ’ ಹೀಗೆ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿರುತ್ತಾರೆ.

Also Read  ಯಾವ ಗುಂಪಿನ ರಕ್ತ ಯಾರಿಗೆ ಹೊಂದುತ್ತದೆಯೆಂದು ತಿಳಿಯಬೇಕೇ...?

error: Content is protected !!
Scroll to Top