6 ಮೈಕ್ರೋ ಬಚತ್ ಪಾಲಿಸಿ ಬಾಂಡ್ ವಿತರಣೆ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ,ಸಪ್ಟೆಂಬರ್.24.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಳಿನೆಲೆ ವಲಯದ 102 ನೆಕ್ಕಿಲಾಡಿ ಒಕ್ಕೂಟದ ಸದಸ್ಯರಿಗೆ ಮೈಕ್ರೋ ಬಚತ್ ಪಾಲಿಸಿ ಬಾಂಡ್ ವಿತರಣೆ ರವಿವಾರ ನಡೆಯಿತು.


ಬಂಟ್ರ ಮರ್ದಾಳ ಹಿ.ಪ್ರಾ ಶಾಲೆಯಲ್ಲಿ ನಡೆದ ಒಕ್ಕೂಟದ ತ್ರೈಮಾಸಿಕ ಸಭೆಯಲ್ಲಿ ಯುವ ವಕೀಲರಾದ ಪ್ರಶಾಂತ್ ಪಂಜೋಡಿ ಅವರು ಸದಸ್ಯರಿಗೆ ಮೈಕ್ರೋ ಬಚತ್ ಪಾಲಿಸಿಯ ಬಾಂಡ್ ವಿತರಿಸಿದರು. ಒಕ್ಕೂಟದ ಅಧ್ಯಕ್ಷ ಗಣಪಯ್ಯ ಗೌಡ ಪಂಜೋಡಿ, ತಾಲೂಕು ಯೋಜನಾಧಿಕಾರಿ ಜನಾರ್ದನ ಎಸ್., ಬಿಳಿನೆಲೆ ವಲಯ ಮೇಲ್ವಿಚಾರಕ ದರ್ಣಪ್ಪ, ಸೇವಾಪ್ರತಿನಿಧಿ ಸತೀಶ್ ಎ., ಒಕ್ಕೂಟದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Also Read  ಉಡುಪಿ:  ಪೋಕ್ಸೋ ಪ್ರಕರಣ   ➤ 20 ವರ್ಷಗಳ ಕಠಿನ ಜೈಲು ಶಿಕ್ಷೆ

error: Content is protected !!
Scroll to Top