➤ ➤ ವನ್ಯಜೀವಿ ಸಪ್ತಾಹ 2019 ಅಂಗವಾಗಿ ವಿವಿಧ ಸ್ಪರ್ಧೆ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.17. ಅಕ್ಟೋಬರ್ 6 ರಂದು ಪಿಲಿಕುಳದಲ್ಲಿ ಪ್ರಕೃತಿ ಮತ್ತು ವನ್ಯಜೀವಿ ವಿಷಯದ ಮೇಲೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ರಾಜ್ಯಮಟ್ಟ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆ :- ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಸಾರ್ವಜನಿಕ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆ ಹಾಗೂ ಪ್ರದರ್ಶನ ನಡೆಯಲಿದೆ. ಭಾರತ ದೇಶದ ಪ್ರಾಣಿ, ಪಕ್ಷಿ, ಉರಗಗಳ ಛಾಯಾಚಿತ್ರಗಳಾಗಿರಬೇಕು. ನಿಸರ್ಗದಲ್ಲಿ ಅಥವಾ ಜೈವಿಕ ಉದ್ಯಾನವನಗಳಲ್ಲಿ ತೆಗೆದ 8.12 ಅಳತೆಗಿಂತ ಕಡಿಮೆಯಾಗದೆ ಛಾಯಾಚಿತ್ರಗಳನ್ನು ಅಕ್ಟೋಬರ್ 4 ರೊಳಗೆ ಕಳುಹಿಸಬೇಕು. ಅಕ್ಟೋಬರ್ 6 ರಂದು ಸಾರ್ವಜನಿಕರಿಗೆ ಪ್ರದರ್ಶಿಸಲಾಗುವುದು.

ಎಲ್ಲಾ ಛಾಯಾಚಿತ್ರಕಾರರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ ಛಾಯಾಚಿತ್ರ ತೆಗೆದ ಸ್ಥಳ, ದಿನಾಂಕ, ಛಾಯಾಚಿತ್ರಕಾರರ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಪ್ರತ್ಯೇಕ ಹಾಳೆಯಲ್ಲಿ ನಮೂದಿಸಬೇಕು.ಅಕ್ಟೋಬರ್ 6 ರಂದು ಹಿರಿಯ, ಕಿರಿಯ, ಪ್ರಾಥಮಿಕ, ಪೌಢಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಮತ್ತು ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳು ಬೇಕಾದ ಸಾಮಾಗ್ರಿಗಳನ್ನು ತರಬೇಕು, ಹಾಳೆಯನ್ನು ಸ್ಥಳದಲ್ಲೇ ನೀಡಲಾಗುವುದು.

Also Read  ನಮ್ ಹುಡ್ಗೀರು ಎಷ್ಟೊಂದು ಮುಂದುವರಿದಿದ್ದಾರೆ ಅಂತೀರಾ...? ಆಡಿಯೋ ಕೇಳಿ ನೋಡಿ...


ಅಕ್ಟೋಬರ್ 7 ರಂದು ಬೆಳಿಗ್ಗೆ 9 ರಿಂದ 1 ಗಂಟೆಯವರೆಗೆ ಮೂಡುಶೆಡ್ಡೆ ಪಂಚಾಯತ್ ಬಳಿ ಸುತ್ತಮತ್ತಲಿನ ಪ್ರದೇಶಗಳ ಸಾಕು ನಾಯಿಗಳಿಗೆ ಹುಚ್ಚು ನಿರೋಧಕ ಲಸಿಕೆ ಮತ್ತು ಜಾನುವಾರುಗಳಿಗೆ ಕಾಲುಬಾಯಿ ಜ್ವರ ನಿರೋಧಕ ಲಸಿಕೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರನ್ನು ನೊಂದಣಿ ಮಾಡಲು ದೂರವಾಣಿ ಸಂಖ್ಯೆ:-0824-2263300, 9980187057, ವೆಬ್‍ಸೈಟ್ www.pilikulazoo.com, ಇಅಂಚೆ- ECAZÉ-   pilikulazoo@gmail.com ಸಂಪರ್ಕಿಸಲು ನಿರ್ದೇಶಕರು ಹೆಚ್ ಜೆ ಭಂಡಾರಿ, ಪಿಲಿಕುಳ ಜೈವಿಕ ಉದ್ಯಾನವನ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top