ಮೂಡುಬಿದಿರೆ: ಬ್ಲಡ್‌ ಬ್ಯಾಂಕ್ ಗ್ರೂಪ್‍ನಿಂದ ರೋಗಿಗಳಿಗೆ ಹಣ್ಣು, ಪಾನೀಯ ವಿತರಣೆ

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಆ .16,  ಬ್ಲಡ್ ಬ್ಯಾಂಕ್ ರಕ್ತದಾನಿಗಳ ಗ್ರೂಪ್‍ನಿಂದ 71ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮೂಡುಬಿದಿರೆಯ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಹಾಗೂ ಅವರ ಬಂಧುಗಳಿಗೆ ಹಣ್ಣುಹಂಪಲು – ಪಾನೀಯ ನೀಡಲಾಯಿತು.

ಈ ಸಂದರ್ಭ ರಕ್ತದಾನಿ ಹಾಗೂ ರಾಜ್ಯಸರಕಾರದಿಂದ ಜೀವರಕ್ಷಕ ಪ್ರಶಸ್ತಿ ವಿಜೇತ ಉದ್ಯಮಿ ಸಿ.ಹೆಚ್. ಅಬ್ದುಲ್ ಗಫೂರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ‘ರಕ್ತದಾನ ಒಂದು ಮಹತ್ವಪೂರ್ಣ ಸಾಮಾಜಿಕ ಜವಾಬ್ದಾರಿಯಾಗಿದ್ದು ಅದನ್ನು ನಿರ್ವಹಿಸುವಲ್ಲಿ ಯುವಜನತೆ ಮುಂದಾಗಿರುವುದು ಸಂತಸ ತಂದಿದೆ. ಇಂತಹ ಬಲಿಷ್ಠ ಯುವಪಡೆ ಯಾವುದೇ ಸಮಯದಲ್ಲಿ ರಕ್ತ ಅಗತ್ಯವಿರುವವರಿಗೆ ಸ್ಪಂದಿಸುವಂತಾಗಬೇಕು. ರಕ್ತದಾನದ ಜೊತೆಗೆ ಸಾಮಾಜಿಕ ಸಂಘಟನೆಯ ಯುವಕರು ಸೇರಿಕೊಂಡು ಸ್ವಾತಂತ್ರೋತ್ಸವವನ್ನು ಆಸ್ಪತ್ರೆಯಲ್ಲಿ ರೋಗಿಗಳು ಹಾಗೂ ಅವರ ಬಂಧುಗಳ ಜೊತೆಯಲ್ಲಿ ಆಚರಿಸುತ್ತಿರುವುದು ಅರ್ಥಪೂರ್ಣ’ ಎಂದರು.
ಪುರಸಭಾ ಸದಸ್ಯ ಅಬ್ದುಲ್ ಬಶೀರ್, ಉದ್ಯಮಿಗಳಾದ ಮುಹಮ್ಮದ್ ಹುಸೈನ್, ಅಬ್ದುಲ್ ರಝಾಕ್, ಬದ್ರುದ್ದೀನ್, ಬ್ಲಡ್ ಬ್ಯಾಂಕ್ ಮೂಡುಬಿದಿರೆಯ ಪ್ರವರ್ತಕರಾದ ಇರ್ಫಾನ್ ಬೆದ್ರ, ಪತ್ರಕರ್ತ ಹಾರಿಸ್ ಹೊಸ್ಮಾರ್,ನ್ಯಾಯವಾದಿ ಇರ್ಷಾದ್ ಎನ್.ಜಿ.,ಮುಹಮ್ಮದ್ ಹುಸೈನ್, ಉಪಸ್ಥಿತರಿದ್ದರು.

error: Content is protected !!
Scroll to Top