ಜಿಲ್ಲಾ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾಟ ➤ ಜ್ಞಾನೋದಯ ಬೆಥನಿ ದ್ವಿತೀಯ

(ನ್ಯೂಸ್ ಕಡಬ) newskadaba.com ನೆಲ್ಯಾಡಿ , ಸಪ್ಟೆಂಬರ್.4.ಅಲೋಶಿಯಸ್ ಕಾಲೇಜು ಮಂಗಳೂರಿನಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಹುಡುಗರ ಬಾಸ್ಕೆಟ್ ಬಾಲ್ ಪಂದ್ಯಾಟದಲ್ಲಿ ಜ್ಞಾನೋದಯ ಬೆಥನಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ.

ದೀಪು, ದಿಶಾಂತ್, ಶೆರ್ವಿನ್ ಶಾಜಿ, ಲಿಬಿನ್, ಅಭಿಜಿತ್,ಮ್ಯಾಥ್ಯೂ, ಅರ್ಷದ್, ಹರ್ಷಿತ್, ಆಯುಷ್, ಜಿತಿನ್ ಹಾಗೂ ಆಲ್ವಿನ್ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು. ಇವರಲ್ಲಿ ದೀಪು, ದಿಶಾಂತ್, ಶೆರ್ವಿನ್ ಶಾಜಿ, ಲಿಬಿನ್ ಹಾಗೂ ಅಭಿಜಿತ್ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಸಂಸ್ಥೆಯ ಪ್ರಾಂಶುಪಾಲರಾದ ರೆ|ಫಾ| ಮ್ಯಾಥ್ಯೂ ಪ್ರಫುಲ್ ಒಐಸಿ ಮಾರ್ಗದರ್ಶನ ನೀಡಿರುತ್ತಾರೆ.

error: Content is protected !!

Join the Group

Join WhatsApp Group