ಬಸ್ ಮತ್ತು ಸ್ಕೂಟಿ ಮುಖಾಮುಖಿ ಡಿಕ್ಕಿ

(ನ್ಯೂಸ್ ಕಡಬ) newskadaba.com ಹೆಬ್ರಿ, ಆಗಸ್ಟ್.28. ಉಡುಪಿಯಿಂದ ಕಾರ್ಕಳ ಹೋಗುತಿದ್ದ ಖಾಸಗಿ ಬಸ್ ಹಾಗೂ ಎದುರುಗಡೆಯಿಂದ ಸ್ಕೂಟಿ ಮುಖಾಮುಖಿ ಡಿಕ್ಕಿ ಹೊಡೆದ ಘಟನೆ ಹಿರಿಯಡ್ಕ ಓಂತಿಬೆಟ್ಟುಎಂಬಲ್ಲಿ ನಡೆದಿದೆ.

ಸ್ಕೂಟಿ ಎದುರು ಕಾರೊಂದು ಚಲಿಸುತ್ತಿದ್ದು ಚಾಲಕ ಮೊಬೈಲ್ ನಲ್ಲಿ ಮಾತನಾಡುತ್ತ ಒಮ್ಮೆಲೆ ಬಲ ಬದಿಗೆ ಬಂದ ಕಾರಣ ಸ್ಕೂಟಿ ಸವಾರ ನಿಯಂತ್ರಣ ತಪ್ಪಿ ಬಸ್ಸಿಗೆ ಡಿಕ್ಕಿ ಹೊಡೆದ ಎನ್ನಲಾಗುತ್ತಿದೆ. ಪರಿಣಾಮ ಸ್ಕೂಟಿ ಸವಾರ ಗಂಭೀರ ಗಾಯಗೊಂಡಿದ್ದಾನೆ.ಗಾಯಗೊಂಡ ವ್ಯಕ್ತಿ ಮೂಲತಃ ಕುಂಜಿಬೆಟ್ಟುವಿನ ನಿವಾಸಿ ಪ್ರಸ್ತುತ ಪೆರ್ಡೂರಿನಲ್ಲಿ ವಾಸವಾಗಿರುವ ಮೂಲ್ಯ (೫೦) ಗಾಯಗೊಂಡವರು. ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

error: Content is protected !!

Join the Group

Join WhatsApp Group