ಕಡಬ:ಶ್ರೀ ಕೃಷ್ಣಾಷ್ಟಮಿಯ ಸಂಭ್ರಮಾಚರಣೆ ➤ ಇದರ ಪ್ರಯುಕ್ತ ಜರುಗಿದ ಅಟ್ಟಿ ಮಡಿಕೆ ಹೊಡೆಯುವ ಸೊಬಗನ್ನು ನೋಡಲು ಬಂದ ಜನ ಸಾಗರ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.26.ಆಗಸ್ಟ್.25.ರಂದು ಕಡಬದ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ  ಶ್ರೀ ಕೃಷ್ಣಾಷ್ಟಮಿಯ ಸಂಭ್ರಮಾಚರಣೆ ಆಚರಿಸಲಾಯಿತು. ಇದರ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಭಜನಾ ಕಾರ್ಯಕ್ರಮವನ್ನು ಏರರ್ಪಡಿಸಲಾಗಿತ್ತು.

ಈ ಹಬ್ಬದ ಪ್ರಯುಕ್ತ ಅಟ್ಟಿ ಮಡಿಕೆ ಹೊಡೆಯುವ ಕಾರ್ಯಕ್ರಮವನ್ನು ಏರರ್ಪಡಿಸಲಾಗಿತ್ತು. ಬೇರೆ ಬೇರೆ ಊರಿನಿಂದ ಬಂದಂತಹ ವಿವಿಧ ತಂಡಗಳು ಈ ಒಂದು ಅಟ್ಟಿ ಮಡಿಕೆ ಹೊಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕೆಲವು ತಂಡಗಳು ಈ ಸ್ಪರ್ಧೆಯಲ್ಲಿ ಬಹುಮಾನಗಳನ್ನು ಪಡೆದುಕೊಂಡಿವೆ. ಈ ಹಬ್ಬದ ವಿಶೇಷತೆಯನ್ನು ಜನರಿಗೆ ತಿಳಿಯ ಪಡಿಸುವ ಉದ್ದೇಶದಿಂದ ಶ್ರೀ ಕೃಷ್ಣನ ವೇಷ ಧರಿಸಿ ನೃತ್ಯ ಪ್ರದರ್ಶನ ಮಾಡಲಾಯಿತು. ಕಲ್ಲಡ್ಕದಿಂದ ಗೊಂಬೆಗಳನ್ನು ತರಿಸಿ ಅದರ ನೃತ್ಯವನ್ನು ನೋಡಲು ಜನಸಾಗರ ನೆರೆದಿತ್ತು.

ಚೆಂಡೆ ಮೇಳ ನಡೆಸಲಾಯಿತು. ಅದರಲ್ಲೂ ವಿಶೇಷವಾಗಿ ಈ ಚೆಂಡೆ ಮೇಳದಲ್ಲಿ ಮಹಿಳೆಯರ ತಂಡವು ಭಾಗವಹಿಸಿತ್ತು. ನಾವು ಯಾರಿಗೂ ಕಮ್ಮಿ ಇಲ್ಲಾ ಎಂಬಂತಹ ಒಂದು ಹುಮ್ಮಸ್ಸಿನಿಂದ ಆ ಮಹಿಳೆಯರ ತಂಡ ಈ ಶ್ರೀ ಕೃಷ್ಣಾಷ್ಟಮಿಯ ಸಂಭ್ರಮಾಚರಣೆಯಲ್ಲಿ ಭಾಗವಹಿಸಿತ್ತು. ಹಾಗೂ ಬ್ಯಾಂಡ್ ಸೆಟ್ ಮೇಳದ ತಂಡಗಳು ಇದರ ಜೊತೆಗೆ ಡಿ.ಜೆ ಸೆಟ್ ನೊಂದಿಗೆ  ಈ ಒಂದು ಶೋಭಾಯಾತ್ತೆಯಲ್ಲಿ ಭಾಗಿಯಾಗಿತ್ತು.ಹಾಗೂ ಸಂಭ್ರಮಾಚರಣೆಯ ಕೊನೆಯ ಹಂತದಲ್ಲಿ ಸಭಾಕಾರ್ಯಕ್ರಮ ನಡೆಸಲಾಯಿತು. ಗಣ್ಯವ್ಯಕ್ತಿಗಳ ಉಪಸ್ಥಿತಿಯೊಂದಿಗೆ ಈ ಸಭೆಯನ್ನು ನಡೆಸಲಾಯಿತು. ಹಾಗೂ ವಿವಿಧ ನೃತ್ಯಗಳನ್ನು ಹಾಗೂ ಧಾರ್ಮಿಕ ಸಂದೇಶವನ್ನು ಸಾರುವ ವಿವಧ ಕಾರ್ಯಕ್ರಮಮಗಳೊಂದಿಗೆ ಈ ಸಭೆಯನ್ನು ಕೊನೆಗೊಳಿಸಲಾಯಿತು.

Also Read  ಆಲಂಕಾರು: ಗೇರು ಮರ ಮುರಿದು ಬಿದ್ದು ಮನೆ ಜಖಂಗೊಂಡ ಘಟನೆ

 

error: Content is protected !!
Scroll to Top