ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಮುಲ್ಕಿ, ಆಗಸ್ಟ್.24. ಒಬ್ಬ ರಿಕ್ಷಾಚಾಲಕ ನವೀನ್ ಎಂಬಾತ   ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಳೆಯಂಗಡಿ ಕೊಪ್ಪಲ ಬಳಿ ನಡೆದಿದೆ.

ಇದು ಆತ್ಮಹತ್ಯೆ ಶಂಕೆ ಎಂದು ವ್ಯಕ್ತವಾಗಿದೆ.ಮೃತಪಟ್ಟ ವ್ಯಕ್ತಿಯು  ಕೊಳುವೈಲು ನಿವಾಸಿ ನವೀನ್ ಕರ್ಕಡ (44) ಎಂಬ ನಿವಾಸಿ ಎಂದು ಗುರುತಿಸಲಾಗಿದೆ. ಇವರು ಹಳೆಯಂಗಡಿಯಲ್ಲಿ ರಿಕ್ಷಾ ಚಾಲನಾ ವೃತ್ತಿಯನ್ನು ನಡೆಸಿಕೊಂಡಿದ್ದರು. ಐದು ವರ್ಷಗಳ ಹಿಂದೆ ಇವರ ಪತ್ನಿ ಮೃತಪಟ್ಟಿದ್ದರು.ನವೀನ್ ಅವರು ಕೆಲವು ಸಮಯಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಇವರಿಗೆ ಇಬ್ಬರು ಪುತ್ರರಿದ್ದಾರೆ.ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!

Join the Group

Join WhatsApp Group