ರೆಂಜಿಲಾಡಿ ಸಾಂತೋಮ್ ವಿದ್ಯಾನಿಕೇತನ್ ಆಂಗ್ಲ ಮಾದ್ಯಮ ಶಾಲೆ ➤ ರಕ್ಷಕ ಶಿಕ್ಷಕ ಸಮಿತಿ ಅಧ್ಯಕ್ಷರಾಗಿ ವಸಂತ ಪೂಜಾರಿ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆಗಸ್ಟ್.19.ರೆಂಜಿಲಾಡಿ ಸಾಂತೋಮ್ ವಿದ್ಯಾನಿಕೇತನ್ ಆಂಗ್ಲ ಮಾದ್ಯಮ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ನೂಜಿಬಾಳ್ತಿಲ ಗ್ರಾ.ಪಂ. ಮಾಜಿ ಅಧ್ಯಕ್ಷ ವಸಂತ ಪೂಜಾರಿ ಬದಿಬಾಗಿಲು ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.


ಉಪಾಧ್ಯಕ್ಷರಾಗಿ ಕಡಬ ತಾಲೂಕು ಮಹಿಳಾ ಮಂಡಲದ ಅಧ್ಯಕ್ಷೆ ಜಯಶ್ರೀ ಹೊಸಮಠ, ಸದಸ್ಯರಾಗಿ ಸಜಿ ಒ.ಕೆ., ಶ್ರೀಧರ್ ಮಿತ್ತೋಡಿ, ವಿನೋಧ ಎನ್ಕಾಜೆ, ಖುಷ ಕುಮಾರ್, ಪ್ರಫುಲ್ಲಾ ರೈ, ರಾಜು, ಕೇಶವ ಕೊಡಂಕೀರಿ, ರೋಯಿ ಟಿ.ಜೆ., ಪ್ರಮೀಳಾ ಕೆ., ಯಶೋಧಾ ಸಂಕೇಶ ಆಯ್ಕೆಯಾಗಿದ್ದಾರೆ. ಶಾಲಾ ಸಂಚಾಲಕ ಫಾ. ಸುನಿಲ್ ಕುರಿಯಾಕೋಸ್ ಪಲ್ಲಿಚ್ಚಡ, ಮುಖ್ಯಶಿಕ್ಷಕಿ ಮೇಘ ಜಾರ್ಜ್, ಕೋಶಾಧಿಕಾರಿ ಎ.ಎಸ್. ಫೈಲಿ ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group