ದ.ಕ ಜಿಲ್ಲಾ ನ್ಯಾಯಾಂಗ ಘಟಕ ➤ಸಂದರ್ಶನ ದಿನ ಮುಂದೂಡಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.17. ದ.ಕ ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಆಗಸ್ಟ್ 22ರಿಂದ 24ರವರೆಗೆ ಸೇವಕ ಹುದ್ದೆಗೆ ಸಂದರ್ಶನವನ್ನು ನಿಗದಿಪಡಿಸಲಾಗಿತ್ತು, ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆದ ಪ್ರಕೃತಿ ವಿಕೋಪದಿಂದಾಗಿ ಸಂದರ್ಶನವನ್ನು ಮುಂದೂಡಲಾಗಿದೆ.

ಸದರಿ ಅಭ್ಯರ್ಥಿಗಳಿಗೆ ಸಂದರ್ಶನವನ್ನು ಸಪ್ಟೆಂಬರ್ 19 ರಿಂದ 21ರವರೆಗೆ ಜಿಲ್ಲಾ ನ್ಯಾಯಾಲಯದಲ್ಲಿ ನಡೆಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ www.ecourts.gov.in/dakshinakannada/online-recruitment ವೆಬ್‍ಸೈಟ್ ಅನ್ನು ಸಂಪರ್ಕಿಸಬೇಕೆಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶರು ದ.ಕ  ಜಿಲ್ಲೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  'ಅಮ್ಮ ಉತ್ತಮ, ಇಂದಿರಾ ಅತ್ಯುತ್ತಮ' ► ಇಂದಿರಾ ಕ್ಯಾಂಟೀನ್ ಗೆ ಬ್ರಿಟಿಷ್ ಸುದ್ದಿವಾಹಿನಿ BBC ಯಿಂದ ಶಹಬ್ಬಾಸ್ ಗಿರಿ

error: Content is protected !!