ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಕಡ್ಯ-ಕೊಣಾಜೆ ಶಾಖೆ ➤ 73ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.15.ದ್ವಜಾರೋಹಣವನ್ನು ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕರಾದ ವಾಸುದೇವ ಭಟ್ ನೆರವೇರಿಸಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಕಡ್ಯಕೊಣಾಜೆ ಗ್ರಾ.ಪಂ ಉಪಾಧ್ಯಕ್ಷ ಯಶೋಧರ ಗೌಡ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕೊಣಾಜೆ ಒಕ್ಕೂಟದ ಮಾಜಿ ಅಧ್ಯಕ್ಷ ದಯಾನಂದ ಬಿ. ಕಡಬ ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರಘಚಂದ್ರ ಗೌಡ ಮನೆಜಾಲು ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಕಡ್ಯ ಹಾ.ಉ.ಸ.ಸಂಘದ ಅಧ್ಯಕ್ಷ ಗಂಗಾಧರ ಗೌಡ, ಶ್ರೀ ಕ್ಷೇ.ಧ.ಗ್ರಾ ಯೋಜನೆ ಕೊಣಾಜೆ ಒಕ್ಕೂಟದ ಅಧ್ಯಕ್ಷ ಪುಂಡರೀಕಾಕ್ಷ ಭಾಗವಹಿಸಿದ್ದರು.

ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಶಿವಣ್ಣ ಗೌಡ,ಪ್ರಮುಖರಾದ ವಿಠಲ ಭಟ್, ಆನಂದ ಬಿ.ಎಸ್, ವಿಶ್ವನಾಥ ಗೌಡ, ವಾಸುದೇವ ಗೌಡ, ಶ್ರೀಧರ ಭಟ್, ಕೊಣಾಜೆ ಶಾಲಾ ಮುಖ್ಯ ಶಿಕ್ಷಕ ರಾಮಕೃಷ್ಣ ,ಗಂಗಾಧರ ಗೌಡ ಬ್ರಂತೋಡು, ದಿನೇಶ್, ನವೀನ, ಉಮೇಶ್, ಗಣೇಶ, ಸುಂದರ ಗೌಡ,ಅಶೋಕ,ತಿಮ್ಮಪ್ಪ ಚಿತ್ರೇಶ್ ಲೋಕೇಶ್,ಮೊದಲಾದವರು ಉಪಸ್ಥಿತರಿದ್ದರು. ಕೊಣಾಜೆ ಶಾಖಾವ್ಯವಸ್ಥಾಪಕರಾದ ಆನಂದ ಗೌಡ ಕೋಂಕ್ಯಾಡಿ ಸ್ವಾಗತಿಸಿ ನಿರೂಪಿಸಿದರು. ಸಿಬ್ಬಂದಿ ದೀಕ್ಷಿತಾ ವಂದಿಸಿದರು.

error: Content is protected !!

Join the Group

Join WhatsApp Group