ಕಡ್ಯ-ಕೊಣಾಜೆ ➤ ಶ್ರೀ ವರಮಹಾಲಕ್ಷ್ಮೀ ಪೂಜೆ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ,, ಆಗಸ್ಟ್.10.ಕಡ್ಯ-ಕೊಣಾಜೆ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ವತಿಯಿಂದ ಕಡ್ಯ ಕೊಣಾಜೆ ಶ್ರೀ ದುರ್ಗಾಂಭಿಕಾ ಭಜನಾ ಮಂದಿರದಲ್ಲಿ ದ್ವಿತೀಯ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜಾ ಕಾರ್ಯಕ್ರಮ ಶುಕ್ರವಾರ ನಡೆಯಿತು.


ಅರ್ಚಕ ರವಿಪ್ರಸಾದ್ ಭಟ್ ನೇತೃತ್ವದಲ್ಲಿ ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು. ಸಮಿತಿಯ ಅಧ್ಯಕ್ಷೆ ವೀಣಾ ಭಟ್, ಉಪಾಧ್ಯಕ್ಷೆಗಾಯತ್ರಿ ಬೊಳೊಳಿ, ಕಾರ್ಯದರ್ಶಿ ಗೋಪಿ ಕೆ., ದಮಯಂತಿ, ಹೇಮಲತಾ ಗುಜ್ಜಳ, ಗ್ರಾ.ಪಂ. ಅಧ್ಯಕ್ಷೆ ಬೇಬಿ, ಪ್ರಮುಖರಾದ ವಾಸುದೇವ ಭಟ್ ಕಡ್ಯ, ಸುಂದರ ಗೌಡ, ರಘುಚಂದ್ರ ಗೌಡ, ಶಿವಪ್ಪ ಗೌಡ ಹಾಕೋಟೆ ಕಾನ, ವಿಠಲ ಭಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಣಾಜೆ ಒಕ್ಕೂಟದ ಅಧ್ಯಕ್ಷರಾದ ಪುಂಡರೀಕಾಕ್ಷ, ಶಿವಣ್ಣ ಗೌಡ, ಭಾಸ್ಕರ ಗೌಡ, ಉಮೇಶ್ ಬತ್ತಿಲು, ಭವಾನಿ ರಘುಚಂದ್ರ ಗೌಡ, ಗಿರಿಜ, ದೇವಕಿ, ಯಶೋದಾ, ಸರಸ್ವತಿ, ಕುಸುಮ ಹಾಕೋಟೆಕಾನ, ಭಾರತಿ, ಮಮತಾ, ಮೀನಾಕ್ಷಿ, ಪುಷ್ಪಾವತಿ, ಕುಸುಮ ದೊಡ್ಡಮನೆ, ಜಯಂತಿ, ಯೋಗಿತಾ, ಚೈತ್ರಾ, ರಶ್ಮಿ, ನೇತ್ರಾವತಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Also Read  ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಪರಿಶದ್ ಇದರ ರಾಷ್ಟ್ರೀಯ ದ್ವಿತೀಯ ಸಮ್ಮೇಳನ - ಮಂಗಳೂರಿನ ಜೊಸ್ಸಿ ಪಿಂಟೊ ಕಿನ್ನಿಗೋಳಿ ಮತ್ತು ಗೋವಾದ ಹಿರಿಯ ಕವಿ ಡಾ ರಾಜಯ್ ಪವಾರ್ ಸೇರಿದಂತೆ ಇಬ್ಬರಿಗೆ ಚಾರೊಳಿ ಚುಟುಕು ರಾಷ್ಟ್ರೀಯ ಸನ್ಮಾನ

error: Content is protected !!
Scroll to Top