ನೆಲ್ಯಾಡಿ ಮೂರ್ತೆದಾರರ ಸಹಕಾರಿ ಸಂಘ ➤ ಪಿಗ್ಮಿ ಸಂಗ್ರಾಹಕ ನಾಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.30.ನೆಲ್ಯಾಡಿ ಮೂರ್ತೆದಾರರ ಸಹಕಾರಿ ಸಂಘದಲ್ಲಿ ಪಿಗ್ಮಿ ಸಂಗ್ರಾಹಕರಾಗಿದ್ದ ಕೃಷ್ಣಪ್ಪ ಪೂಜಾರಿ(47 ) ಎಂಬವರು ಜುಲೈ 26 ರಂದು ಕಾಣೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಹಿರೇಬಂಡಾಡಿ ಗ್ರಾವ್ಮದ ನಂದಿನಿ ನಗರ ನಿವಾಸಿಯಾಗಿರುವ ಇವರು ಜು.25ರಂದು ರಾತ್ರಿ ಮಲಗಿದ್ದವರು, ಕುಟುಂಬದವರು ಬೆಳಿಗ್ಗೆ ನೋಡುವಾಗ ನಾಪತ್ತೆಯಾಗಿದ್ದರು. ಇವರ ಎತ್ತರ 5.5ಅಡಿ, ಕಪ್ಪು ತಲೆಕೂದಲು, ತೆಳ್ಳಗೆ ಶರೀರ, ಬಲಕಾಲಿನ ಮೊಣಗಂಟಿನಲ್ಲಿ ಹಳೆಯ ಗಾಯದ ಗುರುತು ಇದ್ದು, ಬಿಳಿ ಪ್ಯಾಂಟ್ ಮತ್ತು ನೀಲಿ ಬಿಳಿ ಗೆರೆಯಿರುವ ಅಂಗಿ ಧರಿಸಿದ್ದಾರೆ. ಕನ್ನಡ, ತುಳು, ಹಿಂದಿ ಭಾಷೆ ತಿಳಿದಿರುತ್ತದೆ.ಈ ಚಹರೆಯಿರುವ ವ್ಯಕ್ತಿಯ ಪತ್ತೆಯಾದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08251-251055, ಜಿಲ್ಲಾ ನಿಸ್ತಂತು ವಿಭಾಗ ದೂರವಾಣಿ ಸಂಖ್ಯೆ 0824-2220500 ಇಲ್ಲಿಗೆ ಮಾಹಿತಿ ನೀಡಬೇಕಾಗಿ ಠಾಣಾಧಿಕಾರಿ, ಉಪ್ಪಿನಂಗಡಿ ಪೊಲೀಸ್ ಠಾಣೆ ಇವರ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group