ತೆಂಗು ಫಸಲು ಮರು ಹರಾಜು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.26.ದಕ್ಷಿಣಕನ್ನಡ ಜಿಲ್ಲೆಯ ತೋಟಗಾರಿಕೆ ಕ್ಷೇತ್ರಗಳಲ್ಲಿನ 2019-20ನೇ ಸಾಲಿನ 01-04-2019 ರಿಂದ 31-03-2020ರ ಅವಧಿಯ ತೆಂಗು ಫಸಲನ್ನು ಜುಲೈ 16 ರಂದು ಮರು ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.

ಬೆಳಿಗ್ಗೆ ತುಂಬೆ ತೋಟಗಾರಿಕೆ ಕ್ಷೇತ್ರ, ಅಪರಾಹ್ನ ಪಡೀಲ್ ತೋಟಗಾರಿಕೆ ಕ್ಷೇತ್ರ, ಜಿಲ್ಲಾಸಸ್ಯಾಗಾರ, ಮಂಗಳೂರು, ಜೂನ್ 29 ರಂದು ಕಛೇರಿ ನರ್ಸರಿ, ಸುಳ್ಯ ಹೊಸಗದ್ದೆ ತೋಟಗಾರಿಕೆ ಕ್ಷೇತ್ರ, ಸುಳ್ಯ, ಜೂನ್ 30 ರಂದು ಬೆಳ್ತಂಗಡಿ ತಾಲೂಕು ಮದ್ದಡ್ಕ ತೋಟಗಾರಿಕೆ ಕ್ಷೇತ್ರದ ತೆಂಗು ಫಸಲನ್ನು ಮರು ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.ಆಸಕ್ತರು ಹೆಚ್ಚಿನ ವಿವರಗಳಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯವಲಯ, ಮಂಗಳೂರು ದೂರವಾಣಿ ಸಂಖ್ಯೆ:2444298, 2423628 ಕಚೇರಿ ಹಾಗೂ ಕ್ಷೇತ್ರಗಳಲ್ಲಿ ಸಂಪರ್ಕಿಸಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

error: Content is protected !!
Scroll to Top