ಮಂಗಳೂರು ಕೃಷಿ ಇಲಾಖೆಯಿಂದ ಟೆಂಡರ್ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.19ಉಪ ಕೃಷಿ ನಿರ್ದೇಶಕರು-1, ಮಂಗಳೂರು ಕಚೇರಿಯ ಬಳಕೆಗಾಗಿ ಹೊರಗುತ್ತಿಗೆ ಬಾಡಿಗೆ ಆಧಾರದ ಮೇಲೆ ಆಸಕ್ತಿದಾರರಿಂದ ಸ್ಥಳೀಯವಾಗಿ ಟೆಂಡರ್ ಮೂಲಕ ಟಾಟಾ ಇಂಡಿಗೋ, ಟಾಟಾ ಇಂಡಿಕಾ-ಡಿಎಲ್‍ಎಕ್ಸ್ ಮಾದರಿಯ ಎ.ಸಿ. ವಾಹನವನ್ನು ಪಡೆಯಲು ತೀರ್ಮಾನಿಸಿದ್ದು ಆಸಕ್ತರು ಜುಲೈ 25 ರಂದು ಅಪರಾಹ್ನ 5 ಗಂಟೆ ಒಳಗೆ ಟೆಂಡರ್ ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸಬೇಕು.

ಜುಲೈ 26 ರಂದು ಪೂರ್ವಾಹ್ನ 11 ಗಂಟೆಗೆ ಹಾಜರಿರುವ ಟೆಂಡರ್‍ದಾರರ ಸಮಕ್ಷಮ ಪರಿಶೀಲಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಹಾಗೂ ಟೆಂಡರ್ ನಮೂನೆಯನ್ನು ಪಡೆಯಲು ಉಪ ಕೃಷಿ ನಿರ್ದೇಶಕರು-1, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಕಚೇರಿಯನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group