ಲೋಕಸಭಾ ಚುನಾವಣೆಯ ಅವಧಿಯಲ್ಲಿ ಅಮಾನತಿನಲ್ಲಿರಿಸಿದ ಆಯುಧಗಳ ಬಿಡುಗಡೆಗೆ ಆದೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.5. ಲೋಕಸಭಾ ಚುನಾವಣೆಯ ಸಂಬಂಧ ಪೊಲೀಸ್ ಆಯುಕ್ತರ ಕಾರ್ಯ ವ್ಯಾಪ್ತಿಯನ್ನು ಹೊರತು ಪಡಿಸಿ ಜಿಲ್ಲೆಯ ಎಲ್ಲಾ ಆಯುಧ ಪರವಾನಿಗೆದಾರರು ದಿನಾಂಕ:11-03-2019 ರಿಂದ 31-05-2019 ರವರೆಗೆ ಆಯುಧಗಳನ್ನು ಅಮಾನತಿನಲ್ಲಿರಿಸಿ ನಂತರ ಬಿಡುಗಡೆಗೊಳಿಸಲು ಆದೇಶಿಸಲಾಗಿರುತ್ತದೆ.

ಸದ್ರಿ ಅವಧಿಯಲ್ಲಿ ನಗರ ಸ್ಥಳೀಯ ಸಂಸ್ಥೆ, ಹಾಗೂ ಗ್ರಾಮ ಪಂಚಾಯತಿ ಚುನಾವಣೆಯ ಪ್ರಕ್ರಿಯೆಯೂ ಜ್ಯಾರಿಯಲ್ಲಿರುವುದರಿಂದ ಸದ್ರಿ ಚುನಾವಣೆಯ ಸಂಬಂಧ ಪೊಲೀಸ್ ಆಯುಕ್ತರ ಕಾರ್ಯ ವ್ಯಾಪ್ತಿಯನ್ನು ಹೊರತು ಪಡಿಸಿ ಪುತ್ತೂರು(1 ಕಬಕ ಮತ್ತು 5 ನೆಕ್ಕಿಲಾಡಿ) ಹಾಗೂ ಬೆಳ್ತಂಗಡಿ (28 ಉಜಿರೆ ಮತ್ತು 29 ಕೆಯ್ಯೂರು) ಗ್ರಾಮ ಪಂಚಾಯತಿಗಳ ಹಾಗೂ ಸುಳ್ಯ ಪಟ್ಟಣ ಪಂಚಾಯತಿಗಳ ವ್ಯಾಪ್ತಿಯ ಆಯುಧ ಪರವಾನಿಗೆದಾರರು ದಿನಾಂಕ: 16-05-2019 ರಿಂದ 06-06-2019 ರವರೆಗೆ ಆಯುಧಗಳನ್ನು ಅಮಾನತಿನಲ್ಲಿರಿಸಿ ನಂತರ ಬಿಡುಗಡೆಗೊಳಿಸಲು ಆದೇಶಿಸಲಾಗಿರುತ್ತದೆ.

ಆದುದರಿಂದ ಪೊಲೀಸ್ ಆಯುಕ್ತರ ಕಾರ್ಯ ವ್ಯಾಪ್ತಿಯನ್ನು ಹೊರತು ಪಡಿಸಿ, ಪುತ್ತೂರು (1 ಕಬಕ ಮತ್ತು 5 ನೆಕ್ಕಿಲಾಡಿ) ಹಾಗೂ ಬೆಳ್ತಂಗಡಿ (28 ಉಜಿರೆ ಮತ್ತು 29 ಕೆಯ್ಯೂರು) ಗ್ರಾಮ ಪಂಚಾಯತಿಗಳ ಹಾಗೂ ಸುಳ್ಯ ಪಟ್ಟಣ ಪಂಚಾಯತಿಗಳ ವ್ಯಾಪ್ತಿಯ ಆಯುಧ ಪರವಾನಿಗೆದಾರರನ್ನು ಹೊರತು ಪಡಿಸಿ ಉಳಿದಂತೆ ಜಿಲ್ಲೆಯ ಎಲ್ಲಾ ಆಯುಧ ಪರವಾನಿಗೆದಾರರ ಆಯುಧಗಳನ್ನು ಮತ್ತೆ ಆಯುಧ ಪರವಾನಿಗೆದಾರರಿಗೆ ಹಿಂದಿರುಗಿಸುವಂತೆ ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ.

error: Content is protected !!

Join the Group

Join WhatsApp Group