ಎಸ್.ಎಸ್.ಎಲ್.ಸಿ. ಮರುಮೌಲ್ಯಮಾಪನ➤ ಮನೋಜ್‍ಗೆ ಹೆಚ್ಚುವರಿ ಅಂಕ

 

(ನ್ಯೂಸ್ ಕಡಬ) newskadaba.com ,ಕಲ್ಲುಗುಡ್ಡೆ  ಜೂನ್.1.ಕಳೆದ 2019ರಲ್ಲಿ ನಡೆದ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಮರುಮೌಲ್ಯಮಾಪನದ ಬಳಿಕ ಎಂಡೋಪೀಡಿತ ವಿದ್ಯಾರ್ಥಿ ಮನೋಜ್ ಕುಮಾರ್ ಕನ್ನಡದಲ್ಲಿ ಹೆಚ್ಚುವರಿ ಅಂಕಗಳನ್ನು ಪಡೆದಿದ್ದಾರೆ.

ಕನ್ನಡ ವಿಷಯದಲ್ಲಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಇವರು ಈ ಮೊದಲು ಕನ್ನಡದಲ್ಲಿ 67 ಅಂಕ ಪಡೆದಿದ್ದು, ಮರುಮೌಲ್ಯಮಾಪನದ ಬಳಿಕ ಹೆಚ್ಚುವರಿ 14 ಅಂಕ ಸೇರ್ಪಡೆಗೊಂಡಿದ್ದು ಇದೀಗ ಕನ್ನಡದಲ್ಲಿ ಒಟ್ಟು 81 ಅಂಕ ಪಡೆದಿದ್ದಾರೆ. ಇವರ ಒಟ್ಟು ಅಂಕ ಇದೀಗ 406 ಆಗಿದೆ. ಮನೋಜ್ ಕುಮಾರ್ ಎಂಡೋಪೀಡಿತನಾಗಿದ್ದು, ಕೊೈಲ ಎಂಡೋ ಪಾಲನ ಕೇಂದ್ರದಲ್ಲಿ ಇದ್ದುಕೊಂಡು ಪರೀಕ್ಷೆಗೆ ತಯಾರಿ ನಡೆಸಿ, ಪರೀಕ್ಷೆ ಬರೆದಿದ್ದರು. ಇವರು ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಓಟಿಮಾರ್ ಪಲ್ಲತ್ತಡ್ಕ ಭಾಸ್ಕರ ಗೌಡ ಹಾಗೂ ರೇವತಿ ದಂಪತಿಯ ಪುತ್ರ.

error: Content is protected !!
Scroll to Top