ಮಾವು ಬೆಳೆಗಾರರಿಗೊಂದು ಸಿಹಿ ಸುದ್ದಿ➤ಮಧ್ಯವರ್ತಿ ವ್ಯವಹಾರವಿಲ್ಲದೆ ನೇರವಾಗಿ ಬಳಕೆದಾರರಿಗೆ ಮಾರಾಟ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.22.ಮಾವು ಅಭಿವೃದ್ದಿ ಹಾಗೂ ಮಾರಾಟ ಮಂಡಳಿ, ಬೆಂಗಳೂರು ರವರ ಸಹಯೋಗದಲ್ಲಿ ಮಾವು ಬೆಳೆಗಾರರಿಂದ ನೇರವಾಗಿ ಬಳಕೆದಾರರಿಗೆ ಮಾರಾಟ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಮೇ 24 ರಂದು ಕದ್ರಿ ಉದ್ಯಾನವನ, ಮಂಗಳೂರು ಇಲ್ಲ್ಲಿ ರೈತರಿಂದ ನೇರವಾಗಿ ಬಳಕೆದಾರರಿಗೆ ಮಾವು ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.

ಸಾರ್ವಜನಿಕರು ಈ ಮಾವು ಮಾರಾಟದ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಂಡು ಭಾಗವಹಿಸಿದ ರೈತರಿಗೆ ಪ್ರೋತ್ಸಾಹಿಸಲು ಸಾರ್ವಜನಿಕರಲ್ಲಿ ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಮಂಗಳೂರು ಇವರ ತಿಳಿಸಿದ್ದಾರೆ.

error: Content is protected !!

Join the Group

Join WhatsApp Group