ನರಿಮೊಗರು : ಯುವತಿ ಮಂಡಲದಿಂದ  ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ

ನರಿಮೊಗರು  ; ಇಲ್ಲಿನ ಪ್ರಖ್ಯಾತಿ ಯುವತಿ ಮಂಡಲ ಪುರುಷರಕಟ್ಟೆ ಇದರ ವತಿಯಿಂದ ತಾಲೂಕು ಯುವಜನ ಒಕ್ಕೂಟ ಪುತ್ತೂರು ಮತ್ತು ನೆಹರು ಯುವಕೇಂದ್ರ ಮಂಗಳೂರು ಇದರ  ಸಹಕಾರದೊಂದಿಗೆ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಡಿ ಸ್ವಚ್ಛತೆ ಮಾಡಲಾಯಿತು.

 

ಪುರುಷರಕಟ್ಟೆ-ಶಾಂತಿಗೋಡು ರಸ್ತೆಯ ಬದಿಯಲ್ಲಿ ಇದ್ದ ಪ್ಲಾಸ್ಟಿಕ್, ಕಾಗದ, ಕಸ ಕಡ್ಡಿಗಳನ್ನು ತೆಗೆದು ಶುಚಿಗೊಳಿಸಿ-ಎಲ್ಲೆಂದರಲ್ಲಿ ಕಸವನ್ನು ಎಸೆಯದಂತೆ, ಪ್ಲಾಸ್ಟಿಕ್ ನ ಬಳಕೆ ಕಡಿಮೆ ಮಾಡುವಂತೆ ವಿನಂತಿಸಲಾಯಿತು.

 

ಈ ಸಂದರ್ಭ ನೆಹರು ಯುವ ಕೇಂದ್ರದ ತಾಲೂಕು ಸಂಯೋಜಕಿ ಕು.ಜಿಸ್ಮಿತಾ ಕೆ.ಆರ್ ಸಹಕರಿಸಿದರು, ಯುವತಿ ಮಂಡಲದ ಅದ್ಯಕ್ಷೆ ಗುರುಪ್ರಿಯ ನಾಯಕ್, ಸದಸ್ಯರಾದ ಪ್ರಿಯಾ ಕೂಡುರಸ್ತೆ, ವಿದ್ಯಾ ಪ್ರಸಾದ್, ಮೇಘ, ಮೂಕಾಂಬಿಕಾ, ದೀಕ್ಷಿತಾ, ಅಕ್ಷತಾ, ಸಮೃದ್ದಿ ಶೆಣೈ, ಸನ್ನಿದಿ, ದಿವ್ಯ ಉಪಸ್ಥಿತರಿದ್ದರು. ಉದ್ಯಮಿ ವರುಣ್ ಕೂಡುರಸ್ತೆ ಸಹಕರಿಸಿದರು.

error: Content is protected !!

Join the Group

Join WhatsApp Group