ಸರ್ವೆ ಷಣ್ಮುಖ ಯುವಕ ಮಂಡಲದಿಂದ ಕಂಡಡೊಂಜಿ ದಿನ

Newskadaba.comನರಿಮೊಗರು : ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ ಇದರ ವತಿಯಿಂದ ಯುವಕ ಮಂಡಲದ ಸಕ್ರಿಯ ಸದಸ್ಯರ ಕುಟುಂಬ ಸಮ್ಮಿಲನ ಕಾರ್ಯಕ್ರಮ ‘ ಕಂಡಡೊಂಜಿ ದಿನ ‘ ಕರುಂಬಾರು ಗದ್ದೆಯಲ್ಲಿ ನಡೆಯಿತು.
ಯುವಕ ಮಂಡಲದ ಗೌರವಾಧ್ಯಕ್ಷ, ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಎಸ್ ಡಿ ಹಾಗೂ ಗೌರವ ಸಲಹೆಗಾರರಾದ ವೀರಪ್ಪ ಗೌಡ ಕರುಂಬಾರು ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು .
ಎಸ್.ಡಿ.ವಸಂತ ಅವರು ಮಾತನಾಡಿ ,ಯುವಕ ಮಂಡಲದ ಸದಸ್ಯರಲ್ಲಿ ಪರಸ್ಪರ ಪ್ರೀತಿ , ವಿಶ್ವಾಸ , ಸಹಕಾರದ ಮನೋಭಾವನೆ ಇರುವುದರಿಂದ ಗ್ರಾಮದ ಅಭಿವೃದ್ಧಿಯ ನಿಟ್ಟಿನಲ್ಲಿ ಯುವಕ ಮಂಡಲದಿಂದ ಬಹಳಷ್ಟು ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಬಡ್ಡಿ , ವಾಲಿಬಾಲ್ , ಹ್ಯಾಂಡ್ ಬಾಲ್ , ಓಟಗಳು ಮೊದಲಾದ ಸ್ಪರ್ಧೆಗಳಲ್ಲಿ ಸದಸ್ಯರು ಹಾಗೂ ಸದಸ್ಯರ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು .
ಪೆÇಲೀಸ್ ಅ„ಕಾರಿ ಸೀತಾರಾಮ ಗೌಡ ಅವರು ಅತಿಥಿಯಾಗಿ ಭಾಗವಹಿಸಿದ್ದರು . ಭಕ್ತಕೋಡಿ ಎಸ್ ಜಿ ಎಮ್ ಪ್ರೌಢ ಶಾಲೆಯ ಮುಖ್ಯ ಗುರು ಶ್ರೀನಿವಾಸ ಎಚ್ ಬಿ ಅವರು ಸ್ಪರ್ಧೆಗಳ ತೀರ್ಪುಗಾರರಾಗಿ ಸಹಕರಿಸಿದರು .
ಕಾರ್ಯಕ್ರಮ ಸಂಯೋಜಕರಾದ ಗೌತಮ್ ರಾಜ್ ಕರುಂಬಾರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು ., ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು,ಯುವಕ ಮಂಡಲದ ಅಧ್ಯಕ್ಷ ಕಮಲೇಶ್ ಸರ್ವೆದೋಳಗುತ್ತು , ಪ್ರ ಕಾರ್ಯದರ್ಶಿ ತಿಲಕ್ ರಾಜ್ ಕರುಂಬಾರು ಮಾಜಿ ಅಧ್ಯಕ್ಷರಾದ ರಾಜೇಶ್ ಎಸ್ ಡಿ , ಪದಾ„ಕಾರಿಗಳಾದ ವಸಂತ ಪೂಜಾರಿ ಕೈಪಂಗಲದೋಳ, ಶರೀಫ್ ಎಸ್ ಎಮ್ , ವಿನಯ್ ಕುಮಾರ್ ರೈ ಸರ್ವೆ , ನಾಗೇಶ್ ಪಟ್ಟೆ ಮಜಲು ,ಹರೀಶ್ ಅಲೇಕಿ ,ಮನೋಜ್ ಸುವರ್ಣ ಸೊರಕೆ , ಕಿಶೋರ್ ಸರ್ವೆದೋಳಗುತ್ತು , ಕೀರ್ತನ್ ಸರ್ವೆದೋಳಗುತ್ತು , ರವಿ ಸರ್ವೆದೋಳಗುತ್ತು , ಸದಸ್ಯರಾದ ಜಯಂತ್ ಸರ್ವೆದೋಳಗುತ್ತು , ಪ್ರಕಾಶ್ ಅಲೇಕಿ , ಗುರುರಾಜ್ ಪಟ್ಟೆಮಜಲು , ಗೌತಮ್ ಪಟ್ಟೆಮಜಲು , ನಂದನ್ ಸರ್ವೆದೋಳಗುತ್ತು , ಅರುಣ್ ಕೆ ಜೆ , ಕೊರಗಪ್ಪ ಪಾಲೆತ್ತಗುರಿ , ಕೃಷ್ಣಪ್ಪ ಪಟ್ಟೆ ಮಜಲು , ಕೃಷ್ಣಪ್ಪ ಪಾಲೆತ್ತಗುರಿ ಪಾಲ್ಗೊಂಡರು .
ರಾಮಣ್ಣ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು .

error: Content is protected !!

Join the Group

Join WhatsApp Group