ಆತೂರು, ಕುದುಲೂರುನಲ್ಲಿ ಡಾ| ರಘು ಮನೆ ಮನೆ ಭೇಟಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ.20. ಮೇ 12ರಂದು ನಡೆಯುವ ವಿಧಾನ ಸಭಾ ಚುನಾವಣೆಯ ಸುಳ್ಯ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ| ರಘುರವರು ಎ. 20ರಂದು ಬೆಳಿಗ್ಗೆ ಕೊೖಲ ಗ್ರಾಮದ ಕುದುಲೂರು ಹಾಗೂ ರಾಮಕುಂಜ ಗ್ರಾಮದ ಗೋಳಿತ್ತಡಿ, ಗಾಂಧಿಪೇಟೆ ಪರಿಸರದಲ್ಲಿ ಮನೆ ಮನೆ ಭೇಟಿ ನೀಡಿ ಮತ ಯಾಚಿಸಿದರು.

ಡಾ| ರಘುರವರು ಬೆಳಿಗ್ಗೆ ಗೋಳಿತ್ತಡಿಯಲ್ಲಿ ದಿವಂಗತ ಗೋವಿಂದ ಮಾಸ್ಟರ್ ಅವರ ಮನೆಗೆ ಭೇಟಿ ಅವರ ಪುತ್ರ ಶಿವಪ್ರಸಾದ್ ಮತ್ತು ಮನೆಯವರೊಂದಿಗೆ ಮತ ಯಾಚಿಸಿದರು. ಬಳಿಕ ಅಲ್ಲಿಂದ ಕುದುಲೂರು ಪರಿಸರದಲ್ಲಿ ಮನೆಗಳಿಗೆ ಭೇಟಿ ನೀಡಿ ಮತ ಯಾಚಿಸಿದರು. ಕುದುಲೂರು ಪರಿಸರದಲ್ಲಿ ಅಬೂಬಕ್ಕರ್ ಮುಸ್ಲಿಯಾರ್, ಇಬ್ರಾಹಿಂ ಹಾಜಿ ಮೊದಲಾದವರ ಮನೆಗೆ ಭೇಟಿ ನೀಡಿ ಮತ ಯಾಚಿಸಿದರು. ಡಾ| ರಘು ಅವರೊಂದಿಗೆ ಕರ್ನಾಟಕ ಸರ್ಕಾರದ ಅರೆ ಭಾಷೆ ಅಕಾಡೆಮಿ ಸದಸ್ಯ ಯತೀಶ್ ಗೌಡ ಬಾನಡ್ಕ, ಪಕ್ಷದ ಕಾರ್ಯಕರ್ತರಾದ ಗೋಪಾಲ ನಾಯ್ಕ್‌ ಸೀಗೆತ್ತಡಿ, ಹಾಜಿ ಅಬ್ದುಲ್ ರಜಾಕ್, ಆದಂ, ಗಫಾರ್, ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!
Scroll to Top