ಧರ್ಮಸ್ಥಳ ಕೇಸ್:‌ ವಿಚಾರಣೆಗೆ ಹಾಜರಾಗಲು ಯೂಟ್ಯೂಬರ್‌ ಸಮೀರ್‌ಗೆ ನೋಟಿಸ್‌



(ನ್ಯೂಸ್‌ ಕಡಬ) newskadaba.com, ಆ.23: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪದ ಬಗ್ಗೆ ದೂತ ಯೂಟ್ಯೂಬ್ಚಾನಲ್ನಲ್ಲಿ ವಿಡಿಯೋ ಪ್ರಸಾರ ಮಾಡಿದ್ದ ಆರೋಪದ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸಮೀರ್ಎಂ.ಡಿ. ಅವರಿಗೆ ಪೊಲೀಸರು ನೋಟಿಸ್ಜಾರಿ ಮಾಡಿದ್ದಾರೆ.





ಒಂದು ವೇಳೆ ವಿಚಾರಣೆಗೆ ಹಾಜರಾಗದಿದ್ದರೆ ಕೋರ್ಟ್ಆದೇಶ ಉಲ್ಲಂಘನೆಯಾಗಿ ನ್ಯಾಯಾಂಗ ನಿಂದನೆಯಾಗಲಿದೆ.






ವಿಡಿಯೋ ಪ್ರಸಾರದ ಬಗ್ಗೆ ಜು.12ರಂದು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಮೀರ್ಗೆ 3 ಬಾರಿ ನೋಟಿಸ್ಜಾರಿ ಮಾಡಲಾಗಿತ್ತು. ಸಮೀರ್ನ್ನು ಬಂಧಿಸಲು ಧರ್ಮಸ್ಥಳ ಪೊಲೀಸರು ಬೆಂಗಳೂರಿಗೆ ತೆರಳಿದ್ದರು. ಆದರೆ, ಸಮೀರ್ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು.

error: Content is protected !!
Scroll to Top