ದುಲೀಪ್‌ ಟ್ರೋಫಿಯಿಂದ ಹೊರಬಿದ್ದ ಇಶಾನ್‌ ಕಿಶನ್‌



(ನ್ಯೂಸ್‌ ಕಡಬ) newskadaba.com, ಆ.18: ದುಲೀಪ್ಟ್ರೋಫಿಯಿಂದ ಇಶಾನ್ಕಿಶನ್ಹೊರಬಿದ್ದಿದ್ದಾರೆ. ಪೂರ್ವ ವಲಯ ತಂಡದ ನಾಯಕರಾಗಿ ಆಯ್ಕೆಯಾಗಿದ್ದ ಇಶಾನ್ ಗಾಯದ ಕಾರಣ ಹೊರಗುಳಿದಿದ್ದಾರೆ. ಅವರ ಬದಲಿಗೆ ಅಭಿಮನ್ಯು ಈಶ್ವರನ್ಅವರಿಗೆ ಕ್ಯಾಪ್ಟನ್ಸ್ಥಾನ ನೀಡಲಾಗಿದೆ. ಇಶಾನ್ಕಿಶನ್ಸ್ಥಾನಕ್ಕೆ ವಿಕೆಟ್ಬ್ಯಾಟರ್ಆಶೀರ್ವಾದ್ಸ್ವೈನ್ಆಯ್ಕೆಯಾಗಿದ್ದಾರೆ.





ಆಶೀರ್ವಾದ್ಅವರು ಈವರೆಗೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 11 ಪಂದ್ಯಗಳನ್ನು ಆಡಿದ್ದಾರೆ.21 ಇನ್ನಿಂಗ್ಸ್ನಲ್ಲಿ ಆಡಿರುವ ಅವರು 30.75 ಸರಾಸರಿಯಲ್ಲಿ ಒಟ್ಟು 615 ರನ್ಗಳಿಸಿದ್ದಾರೆ. ಇದರೊಂದಿಗೆ ವಿಕೆಟ್ಕೀಪಿಂಗ್ನಲ್ಲಿ 32 ಕ್ಯಾಚ್ಗಳು ಹಾಗೂ 3 ಸ್ಟಂಪಿಂಗ್ಗಳನ್ನು ಮಾಡಿದ್ದಾರೆ.






ದುಲೀಪ್ಟ್ರೋಫಿ 2025 .28ರಿಂದ ಆರಂಭವಾಗಲಿದೆ. ಬಾರಿಯ ಟೂರ್ನಿಯ ಎಲ್ಲಾ ಪಂದ್ಯಗಳು ಬೆಂಗಳೂರಿನ ಬಿಸಿಸಿಐ ಸೆಂಟರ್ಆಫ್ಎಕ್ಸಲೆನ್ಸ್ಮೈದಾನದಲ್ಲಿ ನಡೆಯಲಿದೆ.

ದುಲೀಪ್ಟ್ರೋಫಿಯ ಪೂರ್ವ ವಲಯ ತಂಡ ಹೀಗಿರಲಿದೆ: ಅಭಿಮನ್ಯು ಈಶ್ವರನ್ (ನಾಯಕ), ಆಶೀರ್ವಾದ್ ಸ್ವೈನ್ (ವಿಕೆಟ್ ಕೀಪರ್), ಸಂದೀಪ್ ಪಟ್ನಾಯಕ್, ವಿರಾಟ್ ಸಿಂಗ್, ಡ್ಯಾನಿಶ್ ದಾಸ್, ಶ್ರೀದಾಮ್ ಪಾಲ್, ಶರಣದೀಪ್ ಸಿಂಗ್, ಕುಮಾರ್ ಕುಶಾಗ್ರಾ, ರಿಯಾನ್ ಪರಾಗ್, ಉತ್ಕರ್ಷ್ ಸಿಂಗ್, ಮನೀಷಿ, ಸೂರಜ್ ಸಿಂಧು ಜೈಸ್ವಾಲ್, ಮುಖೇಶ್ ಕುಮಾರ್, ಆಕಾಶ್ ದೀಪ್ ಮತ್ತು ಮೊಹಮ್ಮದ್ ಶಮಿ.

ಸ್ಟ್ಯಾಂಡ್‌ಬೈ: ಮುಖ್ತಾರ್ ಹುಸೇನ್, ವೈಭವ್ ಸೂರ್ಯವಂಶಿ, ಸ್ವಸ್ತಿಕ್ ಸಮಲ್, ಸುದೀಪ್ ಕುಮಾರ್ ಘರಾಮಿ ಮತ್ತು ರಾಹುಲ್ ಸಿಂಗ್.

error: Content is protected !!
Scroll to Top