ಫೇಕ್‌ ನ್ಯೂಸ್‌ ತಡೆಗೆ ಸರ್ಕಾರದಿಂದ ಬಿಲ್‌ ಜಾರಿಯಾಗಲಿದೆ: ಪ್ರಿಯಾಂಕ್‌ ಖರ್ಗೆ

(ನ್ಯೂಸ್‌ ಕಡಬ) newskadaba.com, ಆ.07: ಧರ್ಮಸ್ಥಳದಲ್ಲಿ ಆಗುತ್ತಿರುವ ಗಲಾಟೆ ವಿಚಾರದಲ್ಲಿ ಜನರು ಕಾನೂನು ಕೈಗೆತ್ತಿಕೊಳ್ಳಬಾರದು. ಸರಿಯಾದ ಸುದ್ದಿ, ಸುಳ್ಳು ಸುದ್ದಿ ಎಂದು ಜನರೇ ಹಿಂಸಾಚಾರ ಮಾಡುವುದು ಸರಿಯಲ್ಲ. ಫೇಕ್ನ್ಯೂಸ್ತಡೆಗೆ ಸರ್ಕಾರದಿಂದ ಬಿಲ್ತರುತ್ತಿದ್ದೇವೆ ಎಂದು ಸಚಿವ ಪ್ರಿಯಾಂಕ್ಖರ್ಗೆ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಕೇಸ್ಗೆ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿ ತನಿಖೆ ಆಗುತ್ತಿದೆ. ಮೊದಲು ತನಿಖೆ ಆಗಲಿ. ತನಿಖೆ ನಡೆಯುವಾಗ ಯಾರೂ ಹೀಗೆ ಮಾಡಬಾರದು ಎಂದಿದ್ದಾರೆ.

ಫೇಕ್ನ್ಯೂಸ್ತಡೆಗೆ ಬಿಲ್ಬಂದ ಬಳಿಕ ಇವೆಲ್ಲಾ ಕಡಿಮೆ ಆಗುತ್ತದೆ. ಹಾಗಾಗಿ ಏನೇನೋ ಅರ್ಥೈಸಿಕೊಂಡು ಜನರು ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ ಎಂದು ಹೇಳಿದ್ದಾರೆ.

Scroll to Top