(ನ್ಯೂಸ್ ಕಡಬ) newskadaba.com ಕಡಬ, ಜೂ. 14. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಿಳಿನೆಲೆ ವಲಯದ ಬಿಳಿನೆಲೆ ಕಾರ್ಯಕ್ಷೇತ್ರದ ವ್ಶಾಪ್ತಿಯ ದುರ್ಗಾಂಬಿಕಾ ಸ್ವಸಹಾಯ ಸಂಘದ ಸದಸ್ಶೆ ಶ್ರೀಮತಿ ವಾಮನಕೃಷ್ಣರವರ ವಾಸದ ಮನೆಯು ಭಾರೀ ಗಾಳಿ ಮಳೆಗೆ ಹಾನಿಯಾಗಿದ್ದು, ಮನೆಯ ದುರಸ್ತಿಗಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯಿಂದ ಪೂಜ್ಶ ವೀರೇಂದ್ರ ಹೆಗ್ಗಡೆಯವರು ಹತ್ತು ಸಾವಿರ ಅನುದಾನವನ್ನು ಮಂಜೂರಾತಿ ಮಾಡಿರುತ್ತಾರೆ. ಈ ಮಂಜೂರಾತಿ ಪತ್ರವನ್ನು ಬಿಳಿನೆಲೆ ಗ್ರಾಮಪಂಚಾಯತ್ ಅಧ್ಶಕ್ಷರಾದ ಶ್ರೀಮತಿ ಶಾರದಾರವರು ವಾಮನ ಕೃಷ್ಣರವರ ಕುಟುಂಬದ ಸದಸ್ಶರುಗಳಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ರವರು ಕ್ಷೇತ್ರದಿಂದ ನೀಡಲ್ಪಡುವ ಹಲವಾರು ಅನುದಾನ ಕಾರ್ಯಕ್ರಮಗಳ ಮಾಹಿತಿ ನೀಡಿದರು. ತಾಲೂಕು ಭಜನಾಪರಿಷತ್ ಅಧ್ಶಕ್ಷ ಸುಂದರ ಗೌಡ ಒಗ್ಗುˌ ಬಿಳಿನೆಲೆ ಒಕ್ಕೂಟದ ಅಧ್ಶಕ್ಷ ರಾಜೇಶ್ ಒಗ್ಗುˌ ಸೇವಾಪ್ರತಿನಿಧಿ ಗಣೇಶ್ ಹಾಗೂ ದುರ್ಗಾಂಬಿಕಾ ಸಂಘದ ಸದಸ್ಶರುಗಳು ಉಪಸ್ಥಿತರಿದ್ದರು. ಬಿಳಿನೆಲೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಸ್ವಾಗತಿಸಿ, ಬಿಳಿನೆಲೆ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಸತೀಶ್ ಧನ್ಯವಾದಗೈದರು.