(ನ್ಯೂಸ್ ಕಡಬ) newskafaba.com ಬಂಟ್ವಾಳ, ಜೂ. 11. ಇತ್ತೀಚೆಗೆ ಹತ್ಯೆಗೀಡಾದ ಕೊಳತ್ತಮಜಲು ಅಬ್ದುಲ್ ರಹೀಂ ಮನೆಗೆ ಸ್ಪೀಕರ್ ಯು.ಟಿ ಖಾದರ್ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸಂದರ್ಭ ರಹೀಂ ಸಹೋದರ ಮಾತನಾಡಿ, ನನ್ನ ತಮ್ಮ ಅಮಾಯಕ, ನಾವು ಊರಿನಲ್ಲಿ ಹಿಂದೂ ಮುಸ್ಲಿಮ್ ಅಣ್ಣ ತಮ್ಮ ರೀತಿಯಲ್ಲಿ ಇದ್ದೇವೆ. ನನ್ನ ತಮ್ಮನನ್ನು ವಿನಾ ಕಾರಣ ಹತ್ಯೆ ಮಾಡಿದ್ದಾರೆ. ನಮಗೆ ನ್ಯಾಯ ಸಿಗಬೇಕು, ಎಸ್ಐಟಿ ಮೂಲಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಈ ಪ್ರಕರಣದಲ್ಲಿ 7, 8 ಮಂದಿಯನ್ನು ಮಾತ್ರ ಬಂಧಿಸಲಾಗಿದೆ. ಹಲವರು ಈ ಪ್ರಕರಣದಲ್ಲಿ ಇದ್ದಾರೆ. ಕೊಲೆಗೆ ಯಾರು ಪ್ರೇರೇಪಿಸಿದರು ಅವರನ್ನೂ ಬಂಧಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ರಹೀಂ ಕುಟುಂಬಕ್ಕೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡುವ ಬಗ್ಗೆ ಯ.ಟಿ ಖಾದರ್ ಭರವಸೆಯನ್ನು ನೀಡಿದರು.