ಕಡಬ: ಸೇವಾಪ್ರತಿನಿಧಿಗಳ ಪ್ರಗತಿ ಪರಿಶೀಲನಾ ಕಾರ್ಯಾಗಾರ

(ನ್ಯೂಸ್ ಕಡಬ) newskadaba.com ಜೂ. 10. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಸೇವಾಪ್ರತಿನಿಧಿಗಳು ಹಾಗೂ ಮೇಲ್ವಿಚಾರಕ ಶ್ರೇಣಿ ಸಿಬ್ಬಂದಿಗಳ ಪ್ರಗತಿ ಪರಿಶೀಲನಾ ಕಾರ್ಯಾಗಾರವು ಶ್ರೀ ದುರ್ಗಾಂಭಿಕಾ ಸಭಾಭವನ ಕಡಬದಲ್ಲಿ ನಡೆಯಿತು.

ಕಾರ್ಯಗಾರವನ್ನು ಉಧ್ಘಾಟಿಸಿ ಮಾರ್ಗದರ್ಶನ ನೀಡಿದ ಕರಾವಳಿ ಪ್ರಾದೇಶಿಕ ವ್ಶಾಪ್ತಿಯ ಉಡುಪಿ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣರವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಹಲವಾರು ಕಾರ್ಯಕ್ರಮಗಳನ್ನು ಗ್ರಾಮಮಟ್ಟದಲ್ಲಿ ಅನುಷ್ಟಾನ ಮಾಡುತ್ತಿರುವ ಸೇವಾಪ್ರತಿನಿಧಿಗಳ ಕೆಲಸವು ಹೆಚ್ಚು ಮಹತ್ವ ತರುವಂತಹುದು. ಪೂಜ್ಯ ಹೆಗ್ಗಡೆಯವರ ದೂರದೃಷ್ಟಿತ್ವದ ಯೋಜನೆಯ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ  ಕ್ಷೇತ್ರದ ಮಂಜುನಾಥ ಸ್ವಾಮಿಯ ಕಾಯಕದ  ಕೈಗಳಾಗಿ ಕೆಲಸಮಾಡಬೇಕು. ಅಸಹಾಯಕರಿಗೆ ಆರ್ಥಿಕ ಭದ್ರತೆಗಾಗಿ ಸಹಾಯವನ್ನು ಮಾಡುವುದರ ಜೊತೆಗೆ ಸಾಂತ್ವನದ ಮಾತುಗಳಿಂದ ಬದುಕಿಗೆ ಧೈರ್ಯ ತುಂಬಿಸುವ ಕೆಲಸವೂ ಹೆಚ್ಚು ಪ್ರಾಮುಖ್ಶತೆಯನ್ನು ಪಡೆಯುತ್ತದೆ.

Also Read  ವಿಧಾನಪರಿಷತ್ ಚುನಾವಣೆ- ಯುಟಿ ಖಾದರ್, ಬ್ರಿಜೇಶ್ ಚೌಟ, ಭರತ್ ಶೆಟ್ಟಿ ಮತದಾನ

ಯೋಜನೆಯ ಸಹಕಾರದಿಂದ ನೀಡುತ್ತಿರುವ ಬ್ಶಾಂಕಿಂಗ್ ವ್ಶವಹಾರಗಳು ಹಾಗೂ ಕ್ಷೇತ್ರದಿಂದ ನೀಡುವ ಸಹಾಯಧನಗಳು ಪಾರದರ್ಶಕವಾಗಿರುತ್ತದೆ. ಇದನ್ನು ತಲುಪಿಸುವ ವ್ಶಕ್ತಿಯೂ ಪಾರದರ್ಶಕವಾಗಿ ಪ್ರಾಮಾಣಿಕನಾಗಿದ್ದಾಗ ಜನರಲ್ಲಿ ಉತ್ತಮ ಬಾಂಧವ್ಶವನ್ನು ಪಡೆಯಲು ಸಾಧ್ಶವಾಗುತ್ತದೆ ಎಂದರು. ಈ ಸಂದರ್ಭ 2024-25ನೇ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದ ಕಾರ್ಯಕರ್ತರನ್ನು ಬಹುಮಾನ ನೀಡಿ ಅಭಿನಂದಿಸಲಾಯಿತು. ಯೋಜನೆಯ ಜಿಲ್ಲಾ ನಿರ್ದೇಶಕರು ಬಾಬುನಾಯ್ಕರವರು ಕಡಬ ತಾಲೂಕಿನಲ್ಲಿ ಯೋಜನೆಯ ಕಾರ್ಯಕ್ರಮಗಳನ್ನು ಅನುಷ್ಟಾನಿಸುವ ಕಾರ್ಯವೈಖರಿಯ ಕುರಿತಾಗಿ ಮಾರ್ಗದರ್ಶನ ನೀಡಿದರು. ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಡಬ ತಾಲೂಕು ಯೋಜನಾಕಛೇರಿ ಹಣಕಾಸು ಪ್ರಭಂಧಕಿ ಶ್ರೀಮತಿ ಸುಜಾತ ಸಹಾಯಕ ಪ್ರಭಂಧಕ ಯಶವಂತ್ ಸಾಧನೆ ಮಾಡಿದ ಕಾರ್ಯಕರ್ತರ ವರದಿ ತಯಾರಿಗೆ ಸಹಕರಿಸಿದರು. ಕಾರ್ಯಾಗಾರದಲ್ಲಿ ಕಡಬ ತಾಲೂಕಿನ ಎಲ್ಲಾ ಸಿಬ್ಬಂದಿಗಳೂ ಉಪಸ್ಥಿತರಿದ್ದರು. ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಧನ್ಶವಾದ ನೀಡಿದರು. ತಾಲೂಕು ಜ್ಞಾನವಿಕಾಸ ಸಮನ್ವಾಯಾಧಿಕಾರಿ ಶ್ರೀಮತಿ ಚೇತನ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top